ಬೆಂಗಳೂರು: ಕರ್ನಾಟಕ ಶಾಸಕರಿಗೆ ವೇತನ ಭತ್ಯೆ ಹೆಚ್ಚಳ ಆಗಬೇಕು ಅನ್ನೋ ವಿಚಾರ ಸಾರ್ವಜನಿಕರಿಂದ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸದನದಲ್ಲಿ ಈ ವಿಷಯ ಚರ್ಚೆಗೆ ಬಂದಿಲ್ಲ, ಬಂದಾಗ ಮಾತನಾಡುತ್ತೇನೆ ಎಂದು ಹೇಳಿದರು. ಇನ್ನು ವೈಯಕ್ತಿಕ ಅಭಿಪ್ರಾಯ ತಿಳಿಸಿದ ಯತ್ನಾಳ್, ವೇತನ ಹೆಚ್ಚಳದ ಅವಶ್ಯಕತೆ ನನಗಿಲ್ಲ, ಬೇರೆಯರು ಏನು ಬಯಸುತ್ತಾರೆ ಅಂತ ಹೇಳಲಾರೆ ಎಂದು ಹೇಳಿದರು.