ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ನಡೆಸಿದ ಭಯಾನಕ ದಾಳಿಯಿಂದ ಪ್ರವಾಸಿಗರು ತತ್ತರಿಸಿದ್ರು. ತಮ್ಮ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸಿದ್ರು.. ಈ ಭಯಾನಕ ಪರಿಸ್ಥಿತಿಯಲ್ಲಿ ಅಲ್ಲೇ ಇದ್ದ ಹಾರ್ಸ್ ರೈಡರ್ ಸಯೀದ್ ಆದಿಲ್ ಹುಸೇನ್ ಶಾ ಭಯೋತ್ಪಾದಕರ ವಿರುದ್ಧ ವಿರೋಚಿತ ಹೋರಾಟ ನಡೆಸಿದ್ರು. ಉಗ್ರರು ಗುಂಡಿನಮಳೆಗರೆದರೂ ಬೆದರದ ಧೀರ ಆದಿಲ್, ಪ್ರವಾಸಿಗರ ರಕ್ಷಣೆಗೆ ಯತ್ನಿಸಿದ್ರು.
ಉಗ್ರರ ದಾಳಿಗೆ ಅಡ್ಡಿಪಡಿಸಲು ನೋಡಿದ ಆದಿಲ್, ಭಯೋತ್ಪಾದಕರ ಕೈಯಿಂದ ಬಂದೂಕು ಕಸಿಯಲು ಯತ್ನಿಸಿದ್ರು. ಈ ಹಂತದಲ್ಲಿ ಉಗ್ರರು ತಿರುಗಿಬಿದ್ದು ನಡೆಸಿದ ದಾಳಿಯಲ್ಲಿ ಆದಿಲ್ ಹುತಾತ್ಮನಾಗಿದ್ದಾರೆ.
ಇಲ್ಲಿನ ಪ್ರವಾಸೋದ್ಯಮವನ್ನೇ ನಂಬಿ ಆದಿಲ್ ಕುಟುಂಬ ನಡೆಸುತ್ತಿದ್ದರು. ಪ್ರವಾಸಿಗರನ್ನು ಪಹಲ್ಗಾಮ್ ಕಾರ್ ಪಾರ್ಕಿಂಗ್ ಜಾಗದಿಂದ ಬೈಸರನ್ ಗೆ ಕುದುರೆ ಮೇಲೆ ಕರೆದೊಯ್ಯುವ ಕೆಲಸವನ್ನು ಆದಿಲ್ ಮಾಡ್ತಿದ್ರು. ಇದೀಗ
ಇದೀಗ ಆದಿಲ್ ಇಲ್ಲ. ಅವರ ಕುಟುಂಬ ಬೀದಿಗೆ ಬಿದ್ದಿದೆ