Saturday, September 13, 2025
23 C
Bengaluru
Google search engine
LIVE
ಮನೆರಾಜ್ಯಗೃಹ ಮಂತ್ರಿಗಳು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು -ಮಾಜಿ ಸಚಿವ ಶ್ರೀರಾಮುಲು

ಗೃಹ ಮಂತ್ರಿಗಳು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು -ಮಾಜಿ ಸಚಿವ ಶ್ರೀರಾಮುಲು

ವಿಜಯನಗರ: ರಾಜ್ಯದಲ್ಲಿ ತುಘಲಕ್ ದರ್ಬಾರ್ ಸರ್ಕಾರ ಆಡಳಿದಲ್ಲಿದೆ ಎಂದು ಸೋಮವಾರ ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಜಂಗಲ್ ರಾಜ್ಯ ಮಾಡಲು ಹೊರಟಿದೆ. ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ. ಇದರಿಂದಾಗಿ ಮಹಿಳೆಯರು ನಿರ್ಭಯದಿಂದ ಓಡಾಡಲು ಭಯ ಪಡುವಂತಾಗಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು.

ಕಾನುನು ಸುವ್ಯವಸ್ಥೆ ಸಂಪೂರ್ಣವಾಗಿ ರಾಜ್ಯದಲ್ಲಿ ಹದಗೆಟ್ಟಿದೆ, ಈ ಕೊಲೆ ಪ್ರಕರಣವನ್ನು ಸರ್ಕಾರ ಈ ಕೂಡಲೆ ಸಿಬಿಐಗೆ ವಹಿಸಬೇಕು. ಮೊನ್ನೆ ತಾನೆ ಗದಗದಲ್ಲಿ ನಾಲ್ವರನ್ನು ಹತ್ಯೆ ಮಾಡಲಾಯಿತು ಎಂದರು.

ಬೆಂಗಳೂರಿನಲ್ಲೇ ಜೋಡಿ ಕೊಲೆ ,ಬೀದರನಲ್ಲಿಯೂ ಹತ್ಯೆಯಾಗುತ್ತೆ, ಈ ಸರ್ಕಾರದಲ್ಲಿ ಸಾರ್ವಜನಿಕರಿಗೆ ರಕ್ಷಣೆಯೆ ಇಲ್ಲದಂತಾಗಿದೆ, ಗೃಹ ಮಂತ್ರಿಗಳು ನೈತಿಕ ಹೊಣೆ ಹೊತ್ತು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ನೇಹ ಹಿರೇಮಠ್ ಕೊಲೆ ಪ್ರಕರಣ ಸೇರಿದಂತೆ ರಾಜ್ಯದಲ್ಲಿನ ಅರಾಜುಕತೆ ಸೃಷ್ಟಿಯಾಗಿದೆ ಈ  ಬಗ್ಗೆ ರಾಜ್ಯಪಾಲರ ಬಳಿ ನಿಯೋಗ ಕರೆದುಕಂಡು ಹೋಗುತ್ತೆವೆ ಎಂದು ಶ್ರೀರಾಮುಲು ಹೇಳಿದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments