Monday, June 23, 2025
25.9 C
Bengaluru
Google search engine
LIVE
ಮನೆರಾಜಕೀಯಸೌಮ್ಯ ರೆಡ್ಡಿಗೆ ಅರ್ಚಕ ಸಮುದಾಯದ ಪೂರ್ಣ ಬೆಂಬಲ.

ಸೌಮ್ಯ ರೆಡ್ಡಿಗೆ ಅರ್ಚಕ ಸಮುದಾಯದ ಪೂರ್ಣ ಬೆಂಬಲ.

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಮುಜರಾಯಿ ಇಲಾಖೆ ಸಚಿವರು ಒಬ್ಬರು ಅರ್ಚಕರಿಗೆ ಯಾವ ಪ್ರಮಾಣದಲ್ಲಿ ಸಹಾಯ ಮಾಡಬಹುದು ಎಂಬುದಕ್ಕೆ ರಾಮಲಿಂಗಾರೆಡ್ಡಿ ಅವರು ಸಾಕ್ಷಿಯಾಗಿದ್ದಾರೆ. ಒಬ್ಬ ಸಚಿವರು ಹೃದಯವಂತಿಕೆಯಿಂದ ಕೆಲಸವನ್ನು ಮಾಡಿದರೆ ಎಷ್ಟು ಅನುಕೂಲಗಳನ್ನು ಮಾಡಿಕೊಡಬಹುದು ಎಂಬುದನ್ನು ತಮ್ಮ ಕ್ರಾಂತಿಕಾರಿ ಆದೇಶಗಳ ಮೂಲಕ ಸಾಬೀತುಗೊಳಿಸಿದ್ದಾರೆ.

ರಾಜ್ಯದ ಇತಿಹಾಸದಲ್ಲೇ ರಾಮಲಿಂಗಾರೆಡ್ಡಿ ಅವರು ಮುಜುರಾಯಿ ಸಚಿವರಾಗದ ನಂತರ ಇಡೀ ಇಲಾಖೆಯಲ್ಲಿ ಗಮನಾರ್ಹ ಕಾರ್ಯಕ್ರಮಗಳನ್ನು ಜಾರಿಗೆ ತಂದು ಸೈ ಎನಿಸಿಕೊಂಡಿದ್ದಾರೆ .ನೂತನ ಕಾರ್ಯಕ್ರಮಗಳ ಜಾರಿಗೆಯಿಂದ ಅರ್ಚಕ ಸಮುದಾಯಕ್ಕೆ ಹಿಂದೆಂದೂ ದೊರೆಯದ ಅನುಕೂಲತೆಗಳು ಇದೀಗ ದೊರೆತಿದೆ. ಈ ಕಾರಣಕ್ಕಾಗಿ ಸಮಸ್ತ ಅರ್ಚಕ ಸಮುದಾಯ ರಾಮಲಿಂಗ ರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ ಅವರನ್ನು ಗೆಲ್ಲಿಸಲು ಪಣತೊಟ್ಟಿದ್ದಾರೆ. ಅದರಲ್ಲೂ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯವೇ ನಿರ್ಣಾಯಕ ಮತಗಳನ್ನು ಹೊಂದಿದ್ದು ,ಈ ಬಾರಿ ಸೌಮ್ಯ ರೆಡ್ಡಿಗೆ ಬೆಂಬಲಿಸಲು ಅರ್ಚಕ ಸಮುದಾಯ ನಿರ್ಧರಿಸಿದೆ .

ಬಿ ಮತ್ತು ಸಿ ದರ್ಜೆಯ ದೇವಾಲಯದ ಅರ್ಚಕರಿಗೆ ಉಚಿತವಾದಂತಹ ಕಾಶಿ ಯಾತ್ರೆಯನ್ನು ಮಾಡುವ ಯೋಜನೆಯನ್ನು ಜಾರಿಗೆ ತಂದಿರುವುದು ಉತ್ತರ ಮತ್ತು ದಕ್ಷಿಣ ಕಾಶಿ ಪ್ರವಾಸಕ್ಕೆ ಈ ಮೊದಲು ಇದ್ದ 15,000ಗಳ ಸಹಾಯಧನವನ್ನು 22 ಸಾವಿರ ರೂಪಾಯಿಗಳಿಗೆ ಹೆಚ್ಚಿಸಿದಂತಹ ಕೀರ್ತಿಯು ರಾಮಲಿಂಗ ರೆಡ್ಡಿ ಅವರಿಗೆ ಸಲ್ಲುತ್ತದೆ.

ಸಿ ದರ್ಜೆಯ ಮುಜರಾಯಿ ಇಲಾಖೆಯ ದೇವಾಲಯದ ಅರ್ಚಕರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಿ ಕೊಡುವಂತಹ ಯೋಜನೆಯನ್ನು ರೂಪಿಸಿದ್ದಾರೆ. ಪ್ರಥಮ ಬಾರಿಗೆ ಅರ್ಚಕರಿಗೆ ಎರಡು ಲಕ್ಷ ರೂಪಾಯಿಗಳ ಆರೋಗ್ಯ ವಿಮೆ ಸೌಲಭ್ಯವನ್ನು ಕಲ್ಪಿಸಿ ಕೊಟ್ಟಿದ್ದಾರೆ.

ಅರ್ಚಕರುಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುವ ಸಂದರ್ಭದಲ್ಲಿ ಸಾವನ್ನಪ್ಪಿದರೆ 2 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡುವ ಯೋಜನೆಯನ್ನು ರೂಪಿಸಿದ್ದಾರೆ.

ದೇವಾಲಯಗಳಿಗೆ ಈ ಹಿಂದೆ ನೀಡುತ್ತಿದ್ದ ತಸ್ವಿಕ್ ಹಣವನ್ನ 12,000 ಗಳಿಂದ 60,000ಗಳಿಗೆ ಏರಿಕೆಯನ್ನು ಮಾಡಿರುತ್ತಾರೆ. ಈ ಎಲ್ಲ ಏರಿಕೆಗಳು ಆಗಿರುವುದು ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದಂತಹ ಸಂದರ್ಭದಲ್ಲಿ ಮತ್ತು ರಾಮಲಿಂಗಾರೆಡ್ಡಿ ರವರು ಮುಜರಾಯಿ ಇಲಾಖೆಯ ಸಚಿವರಾದ ಮೇಲಷ್ಟೇ.

ದೇವಾಲಯದ ಅರ್ಚಕರ ಮಕ್ಕಳು ವೈದ್ಯಕೀಯ ಪದವಿಯನ್ನು ವ್ಯಾಸಂಗ ಮಾಡುವ ಸಂದರ್ಭದಲ್ಲಿ ಒಂದು ಲಕ್ಷ ರೂಪಾಯಿಗಳ ಸಹಾಯಧನ, ಇಂಜಿನಿಯರಿಂಗ್ ಪದವಿಗಳಿಗೆ 50,000, ಪದವಿ ವ್ಯಾಸಂಗ ಮಾಡುವವರಿಗೆ 25,000ಗಳ ಪ್ರೋತ್ಸಾಹ ಧನದ ಯೋಜನೆ ನೀಡಲಾಗಿದೆ.

ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ಹಿರಿಯ ನಾಗರಿಕರಿಗೆ ಶೀಘ್ರ ದರ್ಶನದ ವ್ಯವಸ್ಥೆ, ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ತಾಯಂದಿರು ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕವಾದಂತಹ ಕೊಠಡಿಗಳ ವ್ಯವಸ್ಥೆ, ಸಿ ದರ್ಜೆಯ ದೇವಾಲಯಗಳಿಗೆ ಉಚಿತವಾದಂತಹ ನೀರು ಮತ್ತು ವಿದ್ಯುತ್ ಸಂಪರ್ಕದ ವ್ಯವಸ್ಥೆ ಮಾಡಲಾಗಿದೆ.

ರಾಜ್ಯದ ಮುಜರಾಯಿ ಇಲಾಖೆಯ ದೇವಾಲಯಗಳ ಅಭಿವೃದ್ಧಿಗೆ ಹಲವಾರು ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಲಾಗಿದೆ.

ಈ ಹಿಂದೆ ಮಲೆ ಮಾದೇಶ್ವರ ದೇವಸ್ಥಾನದ ಅಭಿವೃದ್ಧಿಗಾಗಿ ಪ್ರಾಧಿಕಾರವನ್ನು ರಚಿಸಿಕೊಟ್ಟಿದಂತಹ ಸಿದ್ದರಾಮಯ್ಯನವರ ಸರ್ಕಾರ ಈಗ ರಾಮಲಿಂಗಾರೆಡ್ಡಿರವರ ಮನವಿಯಂತೆ ಮೈಸೂರಿನ ಚಾಮುಂಡಿ ದೇವಾಲಯ ಮತ್ತು ಉತ್ತರ ಕರ್ನಾಟಕದ ಪ್ರಮುಖ ದೇವಾಲಯಕ್ಕೆ ಪ್ರಾಧಿಕಾರದ ರಚಿಸಲಾಗಿದೆ.

ಮುಜರಾಯಿ ಇಲಾಖೆಯ ಇತಿಹಾಸದಲ್ಲಿಯೇ ಕೇವಲ ಹತ್ತು ತಿಂಗಳ ಅವಧಿಯಲ್ಲಿ ಒಬ್ಬ ಸಚಿವರು ಅರ್ಚಕರ ಹಲವಾರು ದಶಕಗಳ ಎಲ್ಲ ಬೇಡಿಕೆಗಳನ್ನ ಈಡೇರಿಸಿದಂತಹ ಉದಾಹರಣೆ ಇಲ್ಲವೇ ಇಲ್ಲ. ಇಂತಹ ಸಾಧನೆಯನ್ನ ಮಾಡುವುದರ ಜೊತೆಗೆ ಅರ್ಚಕ ಬದುಕಿಗೆ ನೆರವನ್ನ ನೀಡುತ್ತಿರುವ ಅವರ ಅಭಿವೃದ್ಧಿಗಾಗಿ ಪ್ರಾಮಾಣಿಕವಾದಂತಹ ಕಾರ್ಯಕ್ರಮಗಳನ್ನು ನೀಡುತ್ತಿರುವ ರಾಮಲಿಂಗಾರೆಡ್ಡಿರವರ ಕಾರ್ಯ ವೈಖರಿ ಮತ್ತು ಅರ್ಚಕರ ಬಗ್ಗೆ ಇವರಿಗಿರುವ ಗೌರವದ ಸಂಕೇತವಾಗಿದೆ.

ಕಾಂಗ್ರೆಸ್ ಸರ್ಕಾರ ವಿಶೇಷವಾಗಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಕೇವಲ ಒಂದು ಧರ್ಮದವರನ್ನು ಓಲೈಕೆ ಮಾಡುತ್ತಾರೆ ಎನ್ನುವಂತಹ ಆರೋಪಕ್ಕೆ ರಾಮಲಿಂಗಾರೆಡ್ಡಿ ಅವರು ಬ್ರೇಕ್ ಹಾಕಿದ್ದಾರೆ .. ರಾಜ್ಯದ ಕಾಂಗ್ರೆಸ್ ಸರ್ಕಾರ ಮತ್ತು ರಾಮಲಿಂಗಾರೆಡ್ಡಿ ಅವರು ಮುಜರಾಯಿ ಇಲಾಖೆಗೆ ಸಲ್ಲಿಸುತ್ತಿರುವ ಸೇವೆಯನ್ನ ಅನುಷ್ಠಾನಗೊಳಿಸಿರುವ ಕಾರ್ಯಕ್ರಮಗಳನ್ನು ರೂಪಿಸಿರುವ ಯೋಜನೆಗಳು ಟೀಕೆಕಾರರ ಬಾಯಿ ಮುಚ್ಚಿಸಿದೆ .

ಜಯನಗರದ ಶಾಸಕರಾಗಿ ಸೌಮ್ಯ ರೆಡ್ಡಿ ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳ ಜೊತೆಗೆ ಸಮಾಜಿಕ ಸೇವಾ ಮನೋಭಾವ ಕೂಡ ಜನಮನ್ನಣೆ ಪಡೆದಿದೆ .

ಹೋರಾಟದ ಮನೋಭಾವವನ್ನು ಬೆಂಗಳೂರು ದಕ್ಷಿಷ ಕ್ಷೇತ್ರದ ಮತದಾರರು ಪ್ರತ್ಯಕ್ಷವಾಗಿ ನೋಡಿದ್ದಾರೆ. ಇವೆಲ್ಲವನ್ನು ಗಮಮನಿಸಿರುವ ಅರ್ಚಕ ಸಮುದಾಯ ತಮ್ಮ ಸಮುದಾಯದ ವೋಟುಗಳನ್ನು ಸೌಮ್ಯ ರೆಡ್ಡಿ ನೀಡಿ ಬೆಂಬಲಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ .ಇದರಿಂದ ಸೌಮ್ಯ ರೆಡ್ಡಿ ಗೆಲ್ಲುವ ಸಾಧ್ಯತೆಯನ್ನು ಮತ್ತಷ್ಟು ಹೆಚ್ಚಿಸಿದೆ

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments