Tuesday, January 27, 2026
20.2 C
Bengaluru
Google search engine
LIVE
ಮನೆಸಿನಿಮಾರಿಯಾಲಿಟಿ ಶೋ ಒಂದರಲ್ಲಿ ಶ್ರಮಿಕರಿಗೆ ಅವಮಾನ ; ನಟ ರಮೇಶ್ ಅರವಿಂದ್ ಸೇರಿ ಹಲವರ ವಿರುದ್ಧ...

ರಿಯಾಲಿಟಿ ಶೋ ಒಂದರಲ್ಲಿ ಶ್ರಮಿಕರಿಗೆ ಅವಮಾನ ; ನಟ ರಮೇಶ್ ಅರವಿಂದ್ ಸೇರಿ ಹಲವರ ವಿರುದ್ಧ ದೂರು

ಬೆಂಗಳೂರು: ಪಟ್ಟಣದ ಫ್ರೆಂಡ್ಸ್ ದ್ವಿಚಕ್ರ ವಾಹನ ವರ್ಕ್ ಶಾಪ್ ಮಾಲೀಕರು ಹಾಗು ತಂತ್ರಜ್ಞರ ಕ್ಷೇಮಾಭಿವೃದ್ಧಿ ಸಂಘ ದ ಪದಾಧಿಕಾರಿಗಳು ಹಾಗು ಸದಸ್ಯರು, ಕನ್ನಡದ ಖಾಸಗಿ ವಾಹಿನಿಯ ರಿಯಾಲಿಟಿ ಶೋ ಒಂದರ ನಿರ್ಮಾಪಕ, ನಿರ್ದೇಶಕ, ಸ್ಪರ್ಧಿ ಗಗನ, ನಿರೂಪಕಿ ಅನುಶ್ರೀ, ತೀರ್ಪುಗಾರರಾದ ನಟ ರಮೇಶ್ ಅರವಿಂದ್, ಪ್ರೇಮ, ಹಾಗು ಇತರರ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ರಿಯಾಲಿಟಿ ಶೋ ಸ್ಪರ್ಧಿ ಗಗನ ದೃಶ್ಯವೊಂದರ ನಟನೆಯಲ್ಲಿ ಮ್ಯಾಕಾನಿಕ್ ನನ್ನು ಮದುವೆಯಾದರೆ ಗ್ರೀಸ್ ತಿಂದುಕೊಂಡು ಬದುಕಲಾಗದು ಎಂಬ ಮಾತನ್ನು ಆಡಿದ್ದು, ಈ ಮಾತಿನಿಂದ ವೃತ್ತಿಪರ ಮೆಕ್ಯಾನಿಕ್ ಸಮುದಾಯಕ್ಕೆ ನೋವಾಗಿದೆ.

ಶ್ರಮಿಕ ವರ್ಗದ ದುಡಿಮೆ, ವೃತ್ತಿ ಬಗ್ಗೆ ಕುಹೂಕ, ನಿಂದನೆಯ ಮಾತು ಆಡಿರುವ ಸ್ಪರ್ಧಿ ಹಾಗು ಇದಕ್ಕೆ ಉತ್ತೇಜನ ನೀಡಿದವರ ವಿರುದ್ಧ ದೂರು ದಾಖಲಿಸಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments