Wednesday, June 25, 2025
26.3 C
Bengaluru
Google search engine
LIVE
ಮನೆಸಿನಿಮಾಕಿರುತೆರೆಗೆ ಕಾಲಿಟ್ಟ 'ಕಾಟೇರ' ನಿರ್ದೇಶಕ ತರುಣ್​ ಸುಧೀರ್​

ಕಿರುತೆರೆಗೆ ಕಾಲಿಟ್ಟ ‘ಕಾಟೇರ’ ನಿರ್ದೇಶಕ ತರುಣ್​ ಸುಧೀರ್​

ಬೆಂಗಳೂರು : ಕಾಟೇರ’ ದಂತಹಾ ಸೂಪರ್ ಹಿಟ್ ಸಿನಿಮಾ ನೀಡಿರುವ ನಿರ್ದೇಶಕ ತರುಣ್ ಸುಧೀರ್ ದಿಢೀರ್ ಎಂದು ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ‘ಮಹಾನಟಿ’ ಹೆಸರಿನ ರಿಯಾಲಿಟಿ ಶೋ ಪ್ರಸಾರವಾಗಲಿದ್ದು, ತರುಣ್ ಸುಧೀರ್ ಈ ರಿಯಾಲಿಟಿ ಶೋನ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ.

ತರುಣ್ ಸುಧೀ‌ರ್ ಈ ರಿಯಾಲಿಟಿ ಶೋನ ತೀರ್ಪುಗಾರರಲ್ಲಿ ಒಬ್ಬರಾಗಿದ್ದು, ರಿಯಾಲಿಟಿ ಶೋನ ಪ್ರೋಮೋನಲ್ಲಿ ತರುಣ್ ಸುಧೀ‌ರ್ ಕಾಣಿಸಿಕೊಂಡಿದ್ದಾರೆ.

ಕೆಲವರಂತೂ ಕನ್ನಡದಲ್ಲಿ ಒಳ್ಳೆಯ ನಟಿಯರ ಕೊರತೆ ಇದೆಯೆಂಬ ಮಾತುಗಳನ್ನು ಆಗಾಗ್ಗೆ ಆಡುವುದುಂಟು. ಈ ಕೊರತೆಯನ್ನು ನೀಗಿಸಲೆಂದು ‘ಮಹಾನಟಿ’ ರಿಯಾಲಿಟಿ ಶೋ ಪ್ರಾರಂಭವಾಗಿದೆ.

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಆಡಿಷನ್ ನಡೆಸಿ ನಟಿಯಾಗುವ ಅರ್ಹತೆಯುಳ್ಳವರನ್ನು ಆರಿಸಿಕೊಂಡು ಬರಲಾಗಿದ್ದು, ರಿಯಾಲಿಟಿ ಶೋ ಮೂಲಕ ಒಬ್ಬ ‘ಮಹಾನಟಿ’ಯನ್ನು ಆಯ್ಕೆ ಮಾಡಲಾಗುತ್ತದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments