ಬೆಂಗಳೂರು : ಕಾಟೇರ’ ದಂತಹಾ ಸೂಪರ್ ಹಿಟ್ ಸಿನಿಮಾ ನೀಡಿರುವ ನಿರ್ದೇಶಕ ತರುಣ್ ಸುಧೀರ್ ದಿಢೀರ್ ಎಂದು ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ‘ಮಹಾನಟಿ’ ಹೆಸರಿನ ರಿಯಾಲಿಟಿ ಶೋ ಪ್ರಸಾರವಾಗಲಿದ್ದು, ತರುಣ್ ಸುಧೀರ್ ಈ ರಿಯಾಲಿಟಿ ಶೋನ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ.
ತರುಣ್ ಸುಧೀರ್ ಈ ರಿಯಾಲಿಟಿ ಶೋನ ತೀರ್ಪುಗಾರರಲ್ಲಿ ಒಬ್ಬರಾಗಿದ್ದು, ರಿಯಾಲಿಟಿ ಶೋನ ಪ್ರೋಮೋನಲ್ಲಿ ತರುಣ್ ಸುಧೀರ್ ಕಾಣಿಸಿಕೊಂಡಿದ್ದಾರೆ.
ಕೆಲವರಂತೂ ಕನ್ನಡದಲ್ಲಿ ಒಳ್ಳೆಯ ನಟಿಯರ ಕೊರತೆ ಇದೆಯೆಂಬ ಮಾತುಗಳನ್ನು ಆಗಾಗ್ಗೆ ಆಡುವುದುಂಟು. ಈ ಕೊರತೆಯನ್ನು ನೀಗಿಸಲೆಂದು ‘ಮಹಾನಟಿ’ ರಿಯಾಲಿಟಿ ಶೋ ಪ್ರಾರಂಭವಾಗಿದೆ.
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಆಡಿಷನ್ ನಡೆಸಿ ನಟಿಯಾಗುವ ಅರ್ಹತೆಯುಳ್ಳವರನ್ನು ಆರಿಸಿಕೊಂಡು ಬರಲಾಗಿದ್ದು, ರಿಯಾಲಿಟಿ ಶೋ ಮೂಲಕ ಒಬ್ಬ ‘ಮಹಾನಟಿ’ಯನ್ನು ಆಯ್ಕೆ ಮಾಡಲಾಗುತ್ತದೆ.