ಬೆಂಗಳೂರು: ಎರಡು ದಿನಗಳ ಹಿಂದೆಯಷ್ಟೇ ಮುಹೂರ್ತ ಕಂಡ ಸಾರಥಿ ಸಿನೆಮಾ ನಿರ್ಮಾಣ ಮಾಡಿದ್ದ ಸತ್ಯ ಪ್ರಕಾಶ್ ನಿರ್ಮಾಣದ ಇನ್ನು ಹೆಸರಿಡದ ಪ್ರೊಡಕ್ಷನ್ ನಂಬರ್ 2 ರ ದುನಿಯಾ ವಿಜಯ್ ಸಿನಿಮಾವೊಂದು ವಿವಾದಕ್ಕೆ ಗುರಿಯಾಗಿದೆ…
ಈ ಚಿತ್ರದ ಪೋಸ್ಟರ್ 2 ದಿನಗಳ ಹಿಂದೆಯಷ್ಟೇ ಬಿಡುಗಡೆ ಗೊಂಡಿದ್ದು ಅದರಲ್ಲಿ ಹಿಂದೂಗಳ ರಥಕ್ಕೆ ಬೆಂಕಿ ಜ್ವಾಲೆ ಹಚ್ಚಿ ಉರಿಯುತ್ತಿರುವ ಪೋಸ್ಟರ್ ಗೆ ಎಲ್ಲೆಡೆ ಭಾರಿ ಆಕ್ರೋಶ ವ್ಯಕ್ತವಾಗಿದೆ.ಇದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯನ್ನು ಉಂಟುಮಾಡಿದೆ ಎಂದು.ಎಲ್ಲೆಡೆ ಚರ್ಚೆಯಾಗಿದೆ. ಇದೆ ರೀತಿ ಮುಂದುವರೆದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಹಿಂದು ಸಂಘಟನೆಗಳು ಎಚ್ಚರಿಸಿವೆ.