ಶಂಭು ಗಡಿಯಿಂದ ದೆಹಲಿಗೆ ರೈತರು ಪ್ರತಿಭಟನಾ ಮೆರವಣಿಗೆ ಹೊರಡಲು ಸಜ್ಜಾಗಿದ್ದಾರೆ. ಸಾರ್ವಜನಿಕ ಶಾಂತಿ ಕಾಪಾಡುವ ಉದ್ದೇಶದಿಂದ ಹರಿಯಾಣ ಸರ್ಕಾರ ಈ ಕ್ರಮ ಕೈಗೊಂಡಿದೆ.

ಇಂದಿನಿಂದ ಡಿ.17 ರ ವರೆಗೂ ಇಂಟರ್ನೆಟ್ ಸೇವೆ ಸ್ಥಗಿತ ಮುಂದುವರಿಯಲಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಸುಮಿತಾ ಮಿಶ್ರಾ ತಿಳಿಸಿದ್ದಾರೆ. 101 ರೈತರ ಗುಂಪು ಇಂದು ಮಧ್ಯಾಹ್ನ ಶಂಭು ಗಡಿಯಿಂದ ದೆಹಲಿಗೆ ತಮ್ಮ ಪಾದಯಾತ್ರೆಯನ್ನು ಪುನರಾರಂಭಿಸಲು ಯೋಜಿಸಿದೆ.
ದಂಗ್ದೇರಿ, ಲೆಹ್ಗರ್, ಮನಕ್ಪುರ್, ದಡಿಯಾನಾ, ಬರಿ ಘೇಲ್, ಚೋಟಿ ಘೇಲ್, ಲಾರ್ಸಾ, ಕಲು ಮಜ್ರಾ, ದೇವಿ ನಗರ (ಹೀರಾ ನಗರ, ನರೇಶ್ ವಿಹಾರ್), ಸದ್ದೋಪುರ್, ಸುಲ್ತಾನ್ಪುರ್ ಮತ್ತು ಅಂಬಾಲಾದ ಕಕ್ರು ಸೇರಿವೆ. ಸೇವೆಗಳ ಅಮಾನತು ಯಾವುದೇ ಸಾರ್ವಜನಿಕ ಅಸ್ವಸ್ಥತೆಯನ್ನು ತಡೆಗಟ್ಟುವ ಉದ್ದೇಶವನ್ನು ಹೊಂದಿದೆ.


