Monday, December 8, 2025
16.7 C
Bengaluru
Google search engine
LIVE
ಮನೆದೇಶ/ವಿದೇಶಬೆಂಗಳೂರು ಟ್ರಾಫಿಕ್​​ ಬಗ್ಗೆ ಎಂಪಿ ರಾಜೀವ್​​​​​​ ರೈ ಆರೋಪಕ್ಕೆ ಡಿಕೆಶಿ ತಿರುಗೇಟು

ಬೆಂಗಳೂರು ಟ್ರಾಫಿಕ್​​ ಬಗ್ಗೆ ಎಂಪಿ ರಾಜೀವ್​​​​​​ ರೈ ಆರೋಪಕ್ಕೆ ಡಿಕೆಶಿ ತಿರುಗೇಟು

ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್​​​ ನಿರ್ವಹಣೆ ವ್ಯವಸ್ಥೆ ತುಂಬಾ ಕೆಟ್ಟದಾಗಿದೆ ಎಂದು ಪಕ್ಷದ ಎಂಪಿ ರಾಜೀವ್​​​​​​ ರೈ ಟ್ರಾಫಿಕ್​​ ವಿರುದ್ಧ ಎಕ್ಸ್​​ನಲ್ಲಿ ಕಿಡಿಕಾರಿದ್ದರು.. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ ಶಿವಕುಮಾರ್​ ಅವರು, ನಾನು ದೆಹಲಿಯಲ್ಲಿ ಆ ಸಂಸದರನ್ನು ಭೇಟಿಯಾಗುತ್ತೇನೆ. ಬಳಿಕ ದೆಹಲಿಯಲ್ಲಿನ ಟ್ರಾಫಿಕ್​​​​ ನಿರ್ವಹಣೆಯನ್ನು ಅವರಿಗೆ ತೋರಿಸಿ, ಅವರನ್ನು ಕೂಡ ಟ್ಯಾಗ್​ ಮಾಡುತ್ತೇನೆ ಎಂದು ಡಿಕೆ ಶೀವಕುಮಾರ್​​ ತಿರುಗೇಟು ಕೊಟ್ಟಿದ್ಧಾರೆ..

ಬೆಂಗಳೂರಿನಲ್ಲಿ ಅತಿ ಕೆಟ್ಟ ಸಂಚಾರ ನಿರ್ವಹಣೆಯಿದೆ. ಸಂಚಾರ ಪೊಲೀಸರು ಕೂಡ ಅತ್ಯಂತ ಬೇಜವಾಬ್ದಾರಿ, ನಿಷ್ಟ್ರಯೋಜಕರಾಗಿದ್ದಾರೆ. ಅವರು ಪೋನ್ ಕರೆಯನ್ನು ಕೂಡ ಸ್ವೀಕರಿಸುವುದಿಲ್ಲ. ಇವರಿಂದಾಗಿ ಬೆಂಗಳೂರಿನಂತಹ ಸುಂದರ ನಗರದ ಹೆಸರು ಹಾಳಾಗುತ್ತಿದೆ ಎಂದು ರಾಜೀವ್ ರೈ ಅವರ ಆರೋಪ ಮಾಡಿದ್ದರು.

ಬೆಂಗಳೂರಿಗೆ ಭೇಟಿ ನೀಡಿದ್ದ ರಾಜೀವ್ ರೈ ಅವರು ನಗರದ ರಾಜಕುಮಾ‌ರ್ ಸಮಾಧಿ ರಸ್ತೆಯಲ್ಲಿ ಒಂದು ಗಂಟೆಗಿಂತ ಹೆಚ್ಚಿನ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದೆ. ಭಾನುವಾರ ಏರ್‌ಪೋರ್ಟ್‌ಗೆ ತೆರಳಬೇಕಾಗಿದ್ದ ರಾಜೀವ್ ಅವರು ಟ್ರಾಫಿಕ್​​​ನಿಂದ ನನ್ನ ವಿಮಾನ ತಪ್ಪುತಿತ್ತು ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟ್ಯಾಗ್ ಮಾಡಿದ್ದರು..

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments