Thursday, May 1, 2025
30.3 C
Bengaluru
LIVE
ಮನೆಆರೋಗ್ಯಕೇರಳದಲ್ಲಿ ಕೋವಿಡ್​ ಹೆಚ್ಚಳ ಹಿನ್ನೆಲೆ ; ಹೊಸ ಮಾರ್ಗಸೂಚಿ ಬಿಡುಗಡೆ ಮಾಡ್ತೇವೆ : ದಿನೇಶ್ ಗುಂಡೂರಾವ್

ಕೇರಳದಲ್ಲಿ ಕೋವಿಡ್​ ಹೆಚ್ಚಳ ಹಿನ್ನೆಲೆ ; ಹೊಸ ಮಾರ್ಗಸೂಚಿ ಬಿಡುಗಡೆ ಮಾಡ್ತೇವೆ : ದಿನೇಶ್ ಗುಂಡೂರಾವ್

ಬೆಂಗಳೂರು : ಕೇರಳದಲ್ಲಿ ಕೋವಿಡ್​ ಹೆಚ್ಚಳ ಹಿನ್ನೆಲೆ ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್​ ಅವರು, ತಾಂತ್ರಿಕ ಸಲಹಾ ಸಮಿತಿ ಸಲಹೆಗಳ ಮೇಲೆ ಚರ್ಚೆ ಮಾಡಿ ಅಧಿಕೃತ ಪ್ರಕಟಣೆ ಮಾಡ್ತೀವಿ ಹಾಗೂ ಏನು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಅದರ ಪ್ರಕಟಣೆ ಮಾಡ್ತೇವೆ ಎಂದು ಹೇಳಿದರು.

ಕೋವಿಡ್​ ರೂಪಾಂತರಿ ಜೆಎನ್೧ ಬಗ್ಗೆ ಆತಂಕ ಪಡುವ ಯಾವ ಅಗತ್ಯವೂ ಇಲ್ಲ. ಕರ್ನಾಟಕದಲ್ಲಿ ಇನ್ನೂ ಹೊಸ ತಳಿ ದೃಢಪಟ್ಟಿಲ್ಲ. ತೀವ್ರ ಹಾನಿಕಾರಕ ಅಂತ ಕೂಡ ಇದುವರೆಗೆ ಯಾರೂ ಹೇಳಿಲ್ಲ. ಕೋವಿಡ್​ ರೂಪಾಂತರಿ ಜೆಎನ್೧ ಮೇಲೆ ನಿಗಾ ವಹಿಸುತ್ತೇವೆ. ಇಲಾಖೆಯ ಎಲ್ಲ ಕೇಂದ್ರಗಳು ಸಜ್ಜಾಗಿರುವಂತೆ ಸೂಚಿಸಿದ್ದೇವೆ. ಹೊಸ ಮಾರ್ಗಸೂಚಿ ಬಿಡುಗಡೆ ಮಾಡ್ತೇವೆ ಎಂದು ದಿನೇಶ್​ ಗುಂಡೂರಾವ್​ ತಿಳಿಸಿದರು.

ಕೋವಿಡ್​ನಿಂದ ಉಳಿದ ಖಾಯಿಲೆಗಳಿಂದ ರಕ್ಷಣೆಗೆ ಮಾಸ್ಕ್ ಧರಿಸಲು ಹೇಳಿದ್ದೇವೆ. ಟೆಸ್ಟಿಂಗ್ ಹೆಚ್ಚಳ ಮಾಡಲು ಸೂಚಿಸಲಾಗಿದೆ. ಹೊಸದಾಗಿ ಆರ್.ಟಿಪಿಸಿಆರ್ ಕಿಟ್ ಖರೀದಿಗೆ ನೇರವಾಗಿ ಖರೀದಿ ಮಾಡಲು ಡಿಸಿಗಳಿಗೆ ಸೂಚಿಸಿದ್ದೇವೆ. ಎಷ್ಟರ ಮಟ್ಟಿಗೆ ಕೋವಿಡ್ ಹರಡಿದೆ ಎಂದು ಗೊತ್ತಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ತಿಳಿಸಿದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments