Monday, June 23, 2025
25.9 C
Bengaluru
Google search engine
LIVE
ಮನೆ#Exclusive NewsTop News‘ಈಶ್ವರ ಅಲ್ಲಾ ತೇರೋ ನಾಮ್’: ಅಟಲ್ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಏನಿದು ವಿವಾದ..?

‘ಈಶ್ವರ ಅಲ್ಲಾ ತೇರೋ ನಾಮ್’: ಅಟಲ್ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಏನಿದು ವಿವಾದ..?

ಪಾಟ್ನಾ: ಬಿಹಾರ ರಾಜಧಾನಿ ಪಾಟ್ನಾದಲ್ಲಿ ಆಯೋಜಿಸಲಾಗಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಹೊಸ ವಿವಾದವೊಂದು ಭುಗಿಲೆದ್ದಿದೆ. ಖ್ಯಾತ ಜಾನಪದ ಗಾಯಕಿ ದೇವಿ ಅವರು ಕಾರ್ಯಕ್ರಮದಲ್ಲಿ ಮಹಾತ್ಮಾ ಗಾಂಧಿ ಅವರ ನೆಚ್ಚಿನ ಭಜನೆಯಾದ ‘ಈಶ್ವರ ಅಲ್ಲಾ ತೇರೋ ನಾಮ್’ ಹಾಡನ್ನು ಹಾಡುತ್ತಿದ್ದರು. ಈ ವೇಳೆ ಅಲ್ಲಿಯೇ ಇದ್ದ ಕೆಲ ಬಿಜೆಪಿ ಕಾರ್ಯಕರ್ತರು ಗಾಯಕಿ ದೇವಿ ಅವರಿಗೆ ಅಡ್ಡಿ ಪಡಿಸಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಅವರ 100 ನೇ ಜನ್ಮದಿನದ ಹಿನ್ನೆಲೆಯಲ್ಲಿ ಬಾಪು ಸಭಾಗರ್ ಆಡಿಟೋರಿಯಮ್ ನಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಗಾಯಕಿ ದೇವಿ ಅವರು ಈಶ್ವರ ಅಲ್ಲಾ ತೇರೋ ನಾಮ್ ಹಾಡು ಹೇಳಲು ಆರಂಭಿಸುತ್ತಿದ್ದಂತೆ ಸುಮಾರು 50 ಬಿಜೆಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಅಲ್ಲದೆ, ಕ್ಷಮೆ ಕೋರುವಂತೆ ಗಾಯಕಿಗೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಇದರಿಂದ ಆಘಾತಕ್ಕೊಳಗಾದ ಗಾಯಕಿ ದೇವಿ ಅವರು ಕ್ಷಮೆಯಾಚಿಸಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಕೇಂದ್ರದ ಮಾಜಿ ಸಚಿವೆ ಅಶ್ವಿನಿ ಚೌಬೆ ಅವರು ಪರಿಸ್ಥಿತಿಯನ್ನ ಹತೋಟಿಗೆ ತಂದಿದ್ದಾರೆ. ಕ್ಷಮೆಯಾಚನೆಯ ನಂತರ, ಚೌಬೆ ಪ್ರೇಕ್ಷಕರೊಂದಿಗೆ ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಿದರು. ಬಳಿಕ ಮಾತನಾಡಿದ ಮಾಜಿ ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ಇಂತಹ ಘಟನೆ ನಡೆಯಬಾರದಿತ್ತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಸುದ್ದಿಗಅರರೊಂದಿಗೆ ಮಾತನಾಡಿದ ಗಅಯಕಿ ದೇವಿ ಅವರು ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಲು ನನ್ನನ್ನು ಆಹ್ವಾನಿಸಲಾಗಿತ್ತು. ಮತ್ತು ಸಂಘಟಕರು ಭಜನೆ ಹಾಡುವಂತೆ ಮನವಿ ಮಾಡಿದರು. ನಾವು ವಾಜಪೇಯಿ ಸ್ಮರಣಾರ್ಥ ಒಟ್ಟುಗೂಡಿದ್ದರಿಂದ ಮಹಾತ್ಮ ಗಾಂಧೀಜಿಯವರ ನೆಚ್ಚಿನ ಭಜನೆಯಾದ ‘ರಘುಪತಿ ರಾಘವ ರಾಜಾ ರಾಮ್’ ಅನ್ನು ಹಾಡುವುದು ಸೂಕ್ತ ಎಂದು ನಾನು ಭಾವಿಸಿದೆವು. ಆದರೆ ನಾನು ‘ಈಶ್ವರ ಅಲ್ಲಾ ತೇರೋ ನಾಮ್’ ಎಂದು ಪ್ರಾರಂಭವಾಗುವ ಚರಣವನ್ನು ಹಾಡಲು ಪ್ರಾರಂಭಿಸಿದಾಗ ಪ್ರೇಕ್ಷಕರ ಒಂದು ವರ್ಗದಿಂದ ಪ್ರತಿಭಟನೆ ನಡೆಯಿತು. ನಾನು ಹಾಡನ್ನು ತಕ್ಷಣವೇ ನಿಲ್ಲಿಸಬೇಕಾಯಿತು. ಮಹಾತ್ಮಾ ಗಾಂಧಿಯವರ ನೆಚ್ಚಿನ ಭಜನೆಯನ್ನು ವಿಶ್ವದಾದ್ಯಂತ ಅತ್ಯಂತ ಗೌರವದಿಂದ ಹಾಡಲಾಗುತ್ತದೆ. ಆದರೆ ಟಲ್ ಜಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಈ ರೀತಿಯ ಘಟನೆ ನಡೆದಿದ್ದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವಾಜಪೇಯಿ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಅವರ ಕೊಡುಗೆಗಳನ್ನು ಸ್ಮರಿಸಲು ‘ಮುಖ್ಯ ಅಟಲ್ ರಹುಂಗಾ’ ಎಂಬ ಶೀರ್ಷಿಕೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಾಜಿ ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆಯ ಹೊರತಾಗಿ, ಡಾ. ಸಿ.ಪಿ.ಠಾಕೂರ್, ಸಂಜಯ್ ಪಾಸ್ವಾನ್ ಮತ್ತು ಶಹನವಾಜ್ ಹುಸೇನ್, ಬಿಹಾರದ ಬಿಜೆಪಿ ವಕ್ತಾರ ಕುಂತಲ್ ಕೃಷ್ಣ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments