Thursday, November 20, 2025
27.5 C
Bengaluru
Google search engine
LIVE
ಮನೆ#Exclusive NewsTop Newsಸಿದ್ದರಾಮಯ್ಯ: ಅಂದು-ಇಂದು- ಮುಂದು ನಾನೇ ನಂಬರ್ ಒನ್; ಸಮಾವೇಶದ ಮೂಲಕ ಸಿಎಂ ಸಂದೇಶ

ಸಿದ್ದರಾಮಯ್ಯ: ಅಂದು-ಇಂದು- ಮುಂದು ನಾನೇ ನಂಬರ್ ಒನ್; ಸಮಾವೇಶದ ಮೂಲಕ ಸಿಎಂ ಸಂದೇಶ

ಬೆಂಗಳೂರು: ಹಾಸನದಲ್ಲಿ  ನಡೆದ ಕಾಂಗ್ರೆಸ್‌ನ ಜನ ಕಲ್ಯಾಣ ಸ್ವಾಭಿಮಾನಿ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷ ಮತ್ತು ರಾಜ್ಯ ಸರ್ಕಾರ ಎರಡರಲ್ಲೂ ನಾನೇ ನಂಬರ್‌ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಈ ಸಮಾವೇಶವು ಸಿದ್ದರಾಮಯ್ಯನವರ ಇಮೇಜ್ ಅನ್ನು ಹೆಚ್ಚಿಸುವ ಕಾರ್ಯಕ್ರಮವಾಗಿ ಹೊರಹೊಮ್ಮಿದೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಮೂಲವೊಂದು ತಿಳಿಸಿದೆ. “ರಾಜ್ಯದಾದ್ಯಂತ ಸಿದ್ದರಾಮಯ್ಯ ಅವರ ಬೆಂಬಲಿಗರು, ಬಹುತೇಕ ಕುರುಬರು ಸ್ವಯಂಪ್ರೇರಣೆಯಿಂದ ಒಟ್ಟುಗೂಡಿದ್ದರು, ನಾವು ಅವರೊಂದಿಗೆ ಸೇರಿಕೊಂಡೆವು. ಸಿಎಂ ಬದಲಾವಣೆಯಾದರೆ, 138 ಶಾಸಕರ ಪೈಕಿ ಬಹುಮತವು ಸಿದ್ದರಾಮಯ್ಯ ಅವರೊಂದಿಗೆ ಇರುವುದರಿಂದ ಸಿದ್ದರಾಮಯ್ಯ ಅವರ ಮಾತೇ  ಅಂತಿಮವಾಗಿರುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೊಬ್ಬರು ಹೇಳಿದರು.ಸಿಎಂ ಬದಲಾವಣೆಗೆ ಹೈಕಮಾಂಡ್ ನಿಂದ ಒತ್ತಡ ಬಂದರೆ ಸಿದ್ದರಾಮಯ್ಯ ಒಪ್ಪದ ಹೊರತು ಸುಗಮ ಅಧಿಕಾರ ಪರಿವರ್ತನೆ ಅಸಂಭವ ಎಂಬುದು ಸ್ಫಷ್ಟ.

ಇದೇ ವೇಳೆ, ಸಿದ್ದರಾಮಯ್ಯ ಕೂಟಕ್ಕೆ ಸೇರ್ಪಡೆಗೊಂಡ ಕರ್ನಾಟಕ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು, ಸಿದ್ದರಾಮಯ್ಯನವರು ತಮ್ಮ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಅಧಿಕಾರ ಹಸ್ತಾಂತರಿಸುವ ಕುರಿತು ಹೈಕಮಾಂಡ್ ಮಟ್ಟದಲ್ಲಿ ಯಾವುದೇ ಒಪ್ಪಂದವಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮೈದಾನಕ್ಕಿಳಿದಿದ್ದಾರೆ. ಅಧಿಕಾರ ಹಂಚಿಕೆಯ ಯಾವುದೇ ಒಪ್ಪಂದದ ಬಗ್ಗೆ ನನಗೆ ತಿಳಿದಿಲ್ಲ. ಈ ಬಗ್ಗೆ ದೆಹಲಿ ಮತ್ತು ರಾಜ್ಯದಲ್ಲಿ ಎರಡು ಮೂರು ಜನರನ್ನು (ಕಾಂಗ್ರೆಸ್ ನಾಯಕರು) ಕೇಳಿದ್ದೇನೆ. ಒಪ್ಪಂದ ಆಗಿದೆ ಎಂದು ಯಾರೂ ಹೇಳಿಲ್ಲ. ಶಿವಕುಮಾರ್ ಅವರು ಹೇಳಿರುವ ಒಪ್ಪಂದದ ಅರ್ಥ ಏನೆಂದು ನನಗೆ ತಿಳಿದಿಲ್ಲ. ಅಂತಹ ಯಾವುದೇ ಒಪ್ಪಂದವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಡಾ ಪರಮೇಶ್ವರ ಅವರು ಬುಧವಾರ ಹೇಳಿದ್ದ ಸಿದ್ದರಾಮಯ್ಯನವರ ಭಾವನೆಗಳನ್ನು ಪ್ರತಿಧ್ವನಿಸಿದ್ದಾರೆ.

 

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments