ಶ್ರೀಮಂತರಾದರೂ ಸಾಮಾನ್ಯ ವ್ಯಕ್ತಿಗಳಂತೆ ಇರುವ ವ್ಯಕ್ತಿಗಳು ತುಂಬಾ ಅಪರೂಪ. ಯಾವುದೇ ಆಡಂಬರ, ತೋರ್ಪಡಿಕೆ ಇಲ್ಲದೆ ಸಾಧಾರಣ ಜೀವನ ನಡೆಸುತ್ತಿರುವ ದೈತ್ಯ ಕಂಪನಿಯ ಸಿಇಓ ಈಗ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದ್ದಾರೆ.
ಸಾಫ್ಟ್ ವೇರ್ ದೈತ್ಯ ಕಂಪನಿಗಳಲ್ಲಿ ಒಂದಾದ ಜೊಹೊ ಕಾರ್ಪೊರೇಷನ್ ಸಿಇಒ ಶ್ರೀಧರ್ ವೆಂಬು, ಭಾರತದ ಶ್ರೀಮಂತರ ಪಟ್ಟಿಯಲ್ಲಿ 55ನೇ ವ್ಯಕ್ತಿ. ಬಿಲಿಯನೇರ್ ಆದರೂ ಇವರು ಹಳ್ಳಿಯಲ್ಲಿ ಸಾಧಾರಣ ಜೀವನ ನಡೆಸುತ್ತಿದ್ದಾರೆ.
ಶ್ರೀಧರ್ ವೆಂಬು ಅವರಿಗೆ 2021ರಲ್ಲಿ ಪದ್ಮಶ್ರೀ ಅವಾರ್ಡ್ ನೀಡಿ ಗೌರವಿಸಲಾಗಿದೆ. ಸದ್ಯ ಎಲೆಕ್ಟ್ರಿಕ್ ಆಟೋ ಖರೀದಿಸಿದ ಶ್ರೀಧರ್ ವೆಂಬು ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.