Tuesday, March 3, 2026
22.4 C
Bengaluru
Google search engine
LIVE
ಮನೆ#Exclusive News#BREAKING: ಬಂಡಾಯ ಸ್ಪರ್ಧೆ ಮಾಡದಿರಲು ವಿನಯ್ ಕುಮಾರ್ ತೀರ್ಮಾನ!

#BREAKING: ಬಂಡಾಯ ಸ್ಪರ್ಧೆ ಮಾಡದಿರಲು ವಿನಯ್ ಕುಮಾರ್ ತೀರ್ಮಾನ!

ಕಾಗಿನೆಲೆ ಶ್ರೀಗಳು ( #Kaginele Seer )ನಡೆಸಿದ ರಾಜೀ ಸಂಧಾನ ಫಲಕೊಟ್ಟಿದೆ. ಪರಿಣಾಮ ದಾವಣಗೆರೆ ಕಾಂಗ್ರೆಸ್​ನಲ್ಲಿ ಬಂಡಾಯ ಶಮನವಾಗಿದೆ. ದಾವಣಗೆರೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದ ಇನ್​ಸೈಟ್​ ಸಂಸ್ಥಾಪಕ ವಿನಯ್ ಕುಮಾರ್​ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಕಾಂಗ್ರೆಸ್ ಪಕ್ಷದ ವಿರುದ್ಧ ಹೋಗದಿರಲು ತೀರ್ಮಾನಿಸಿದ್ದಾರೆ.

ಕಾಂಗ್ರೆಸ್​ ಪ್ರಭಾ ಮಲ್ಲಿಕಾರ್ಜುನ್​ಗೆ ಟಿಕೆಟ್ ನೀಡದ ಕಾರಣ ವಿನಯ್​ಕುಮಾರ್​ ಮುನಿಸಿಕೊಂಡಿದ್ದರು. ಬಂಡಾಯ ಸ್ಪರ್ಧೆ ಮಾಡಲು ಹಳ್ಳಿ ಹಳ್ಳಿ ಸುತ್ತಿ ಜನಾಭಿಪ್ರಾಯ ಸಂಗ್ರಹಿಸಿದ್ದರು. ಕಾಂಗ್ರೆಸ್ ನಾಯಕರು ನಡೆಸಿದ ಓಲೈಕೆ ಪ್ರಯತ್ನ ಫಲಿಸಿರಲಿಲ್ಲ. ಹೀಗಾಗಿ ಕಡೆ ಕ್ಷಣದಲ್ಲಿ ಕುರುಬ ಸಮುದಾಯದ ಕಾಗಿನೆಲೆ ಮಠದ ಶ್ರೀಗಳು ಮಧ್ಯಪ್ರವೇಶ ಮಾಡಿದ್ದರು. ಬಂಡಾಯ ಸ್ಪರ್ಧೆ ಮಾಡದಂತೆ ವಿನಯ್​ಕುಮಾರ್​ ಮನವೊಲಿಸುವಲ್ಲಿ ಕಾಗಿನೆಲೆ ಶ್ರೀಗಳು ಸಫಲರಾಗಿದ್ದಾರೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿಸಿದ್ದಾರೆ. ಪ್ರಭಾ ಮಲ್ಲಿಕಾರ್ಜುನ್ ಪರವಾಗಿ ಪ್ರಚಾರ ಮಾಡಲು ವಿನಯ್ ಕುಮಾರ್ ಒಪ್ಪಿಗೆ ಸೂಚಿಸಿದ್ದಾರೆ.

ದಾವಣಗೆರೆ ಯುವ ಸಮೂಹದಲ್ಲಿ ವಿನಯ್ ಕುಮಾರ್ ಚುಂಬಕ ಶಕ್ತಿಯಾಗಿ ಬೆಳೆದಿದ್ದಾರೆ. ಯುವ ಸಮೂಹದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. ಈ ವಿಚಾರವೀಗ ಸಚಿವ ಎಸ್​ಎಸ್​ ಮಲ್ಲಿಕಾರ್ಜುನ್ ಅವರಿಗೂ ಅರ್ಥವಾಗಿದೆ. ಹೀಗಾಗಿ ಸಚಿವ ಎಸ್​ಎಸ್​ ಮಲ್ಲಿಕಾರ್ಜುನ್ ಸಹ ವಿನಯ್ ಕುಮಾರ್ ವಿಚಾರದಲ್ಲಿ ಮೃದುವಾಗಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments