Top Newsಸುದ್ದಿ

ಅಂಧ ಪ್ರಯಾಣಿಕ ಕೈತೋರಿದರೂ ನಿಲ್ಲದ BMTC

ಬೆಂಗಳೂರು:ಅಗಸ್ಟ್ 2 ರಂದು ರಾತ್ರಿ 8.30ರ ಸಮಯದಲ್ಲಿ ವಿಕಲಚೇತನನೋರ್ವ ಕೈತೋರಿಸಿದರೂ ಬಸ್ ನಿಲ್ಲಿಸದೆ ಚಲಾಯಿಸಿಕೊಂಡು ಹೋದ ಘಟನೆ ವೈಯಾಲಿಕಾವಲ್​ ಬಸ್​ ನಿಲ್ದಾಣದ ಬಳಿ ನಡೆದಿದೆ.
ಅಂದು ರಾತ್ರಿ ವಿಕಲಚೇತನ ಅಂಧ ಪ್ರಯಾಣಿಕ ಕಾವಲ್​ ಭೈರಸಂದ್ರದಿಂದ ಮಾಗಡಿ ರಸ್ತೆಗೆ ತೆರಳಬೇಕಾಗಿತ್ತು. ಈ ಭಾಗಕ್ಕೆ ಹೊರಟಿದ್ದ 176B ಬಿಎಮ್​ಟಿಸಿ ಬಸ್​ಗೆ ಪ್ರಯಾಣಿಕ ಕೈ ತೋರಿಸಿದರೂ ಕೂಡ ಅದು ನಿಂತಿಲ್ಲ. ನಗರ ಸಾರಿಗೆ ಸಂಪರ್ಕದಲ್ಲಿ ಉತ್ತಮ ಸೇವೆ ಗಳಿಸಿದ್ದರೂ ಕೂಡ ಇಂತಹ ಘಟನೆಗಳಿಂದ ಈ ಸಂಸ್ಥೆಗಳಿಗೆ ಕೆಟ್ಟ ಹೆಸರು ಬರುತ್ತಿದೆ. ಹಲವೆಡೆ ಬಸ್​ ನಿಲ್ಲಿಸದೆ ಹೋಗುತ್ತಾರೆ. ಅಜಾಗರೂಕತೆಯಿಂದ ಚಾಲನೆ ಮಾಡುತ್ತಾರೆ ಎಂಬುದು ಇಂಥಾ ಪ್ರಕರಣಗಳಿಂದ ತಿಳಿದುಬರುತ್ತದೆ. ಪಾಸ್​-ಕಾಸ್​ ಕೊಟ್ಟು ಪ್ರಯಾಣಿಸುವವರ ಕಥೆ ಇದಾದರೆ ಆಧಾರ್​ ತೋರಿಸಿ ಪ್ರಯಾಣಿಸುವವರ ಕಥೆ ಏನೆಂಬುದು ತಿಳಿಯದಾಗಿದೆ. ಇಂಥಾ ಪ್ರಕರಣಗಳತ್ತ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ನೀಡುವ ಸೂಚನೆಗಳೂ ಕೂಡ ಜಾರಿಗೆ ಬರುತ್ತಿಲ್ಲ ಎನ್ನುತ್ತಾರೆ ಹಲವಾರು ಸಿಬ್ಬಂದಿ.

Comments (0)

Your email address will not be published. Required fields are marked *

Back to top button