ಬೆಂಗಳೂರು : ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ಅಟ್ಟಹಾಸಕ್ಕೆ 28 ಜನ ಸಾವನ್ನಪ್ಪಿದ್ದಾರೆ.ಆದರೆ ಬಿಜೆಪಿ ಮುಖಂಡನೊಬ್ಬ ಸೈನಿಕರ ಜೊತೆ ರೀಲ್ಸ್ ಮಾಡಿ ಕುಣಿದು ಕುಪ್ಪಳಿಸುತ್ತಿದ್ದಾನೆ.ಜಮ್ಮು ಕಾಶ್ಮೀರದ ಮಾಜಿ ಶಾಸಕ ರವೀಂದರ್ ರಾಣಾ ಸೈನಿಕರ ಜೊತೆ ಮೊಜು ಮಸ್ತಿ ಮಾಡುತ್ತಿದ್ದಾನೆ.ಪ್ರಸ್ತುತ ಬಿಜೆಪಿ ಪಕ್ಷದ ಕಾರ್ಯಕಾರಿಣಿಯ ಸದಸ್ಯನಾಗಿದ್ದಾನೆ ರವೀಂದರ್ ರಾಣಾ..
ಇಡೀ ದೇಶವೇ ಪಹಲ್ಗಾಮ್ ದಾಳಿಯ ಶೋಕದಲ್ಲಿದೆ ಮುಳುಗಿದೆ.ಸದ್ಯ ಬಿಜೆಪಿ ನಾಯಕನ ಯೋಧರ ಜೊತೆ ಮಾಡಿರುವ ನೃತ್ಯ ದೇಶದೆಲ್ಲೆಡೆ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸದ್ದು ಮಾಡುತ್ತಿದೆ.ಬಿಜೆಪಿ ನಾಯಕನ ವಿರುದ್ದ ದೇಶದ್ಯಂತ ಆಕ್ರೋಶ ಭುಗಿಲೆದ್ದಿದೆ.ಪಹಲ್ಗಾಮ್ ದಾಳಿಯಿಂದ ಬಿಜೆಪಿ ನಾಯಕರು ದುಃಖಿತರಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ.
ಸೈನಿಕರನ್ನು ಬಳಸಿಕೊಂಡು ಬಿಜೆಪಿ ಪಕ್ಷವು ಪ್ರಚಾರ ಮಾಡುಕೊಳ್ಳುತ್ತಿದೆ..ಇದನ್ನೆಲ್ಲಾ ಪ್ರಧಾನಿ ಮೋದಿ ಒಪ್ಪಿಕೊಳ್ತಾರಾ ..? ನಾಚೆಕೆಗೇಡು ಅಂತ ಕಾಂಗ್ರೆಸ್ ಟ್ವೀಟಾಸ್ತ್ರ ಸಮರ ಸಾರಿದೆ..