ಬೀದರ್: ಎಟಿಎಂ ಸಿಬ್ಬಂದಿಗೆ ಶೂಟ್ ಮಾಡಿ ದರೋಡೆ ಮಾಡಿದ ಪ್ರಕರಣದ ಇಬ್ಬರು ದರೋಡೆಕೋರರ ಗುರುತು ಪತ್ತೆ ಹಚ್ಚುವಲ್ಲಿ ಬೀದರ್ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಜನವರಿ 16ರಂದು ದರೋಡೆಕೋರರು ಎಟಿಎಂ ಸಿಬ್ಬಂದಿ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದಾರೆ. ಒಂದು ತಿಂಗಳು ಕಳೆಯುತ್ತಾ ಬಂದರೂ ದರೋಡೆಕೋರರು ಇನ್ನೂ ಪತ್ತೆಯಾಗಿಲ್ಲ. ಒಂದು ತಿಂಗಳ ಬಳಿಕ ಆರೋಪಿಗಳ ಖಚಿತ ಮಾಹಿತಿಯನ್ನು ಬೀದರ್ ಪೊಲೀಸರು ಬಹಿರಂಗ ಪಡೆಸಿದ್ದಾರೆ. ಆರೋಪಿಗಳ ಖಚಿತ ಮಾಹಿತಿಯೊಂದಿಗೆ ಸುಳಿವು ಕೊಟ್ಟವರಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಬಿಹಾರ ರಾಜ್ಯದ ವೈಶಾಲಿ ಜಿಲ್ಲೆಯ ಫತೇಪುರ ಫುಲ್ರಿಯಾ ನಿವಾಸಿ ಅಮನ್ ಕುಮಾರ್ ರಾಜಕಿಶೋರ್ ಸಿಂಗ್ ಹಾಗೂ ಮಹಿಸೋರ್ ನಿವಾಸಿ ಅಲೋಕ್ ಕುಮಾರ್ ಕೃತ್ಯ ಎಸಗಿದವರು ಎಂದು ತಿಳಿದುಬಂದಿದೆ.