Friday, November 21, 2025
20 C
Bengaluru
Google search engine
LIVE
ಮನೆಕ್ರೈಂ ಸ್ಟೋರಿ70 ಲಕ್ಷಕ್ಕೆ ಸುಪಾರಿ; MLC ರಾಜೇಂದ್ರ ಕಂಪ್ಲೇಂಟ್

70 ಲಕ್ಷಕ್ಕೆ ಸುಪಾರಿ; MLC ರಾಜೇಂದ್ರ ಕಂಪ್ಲೇಂಟ್

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ವಿಚಾರ ಸಂಚಲನ ಸೃಷ್ಟಸಿತ್ತು. ವಿಧಾನಸಭೆ ಅಧಿವೇಶನದಲ್ಲಿ ಸಚಿವ ರಾಜಣ್ಣ ತಮ್ಮ ಮೇಲೆ ಹನಿಟ್ರ್ಯಾಪ್​ಗೆ ಯತ್ನಿಸಲಾಗಿದೆ ಎಂದು ಆರೋಪಿಸಿದ್ದರು. ಬಳಿಕ ಇದಕ್ಕೆ ಸಂಬಂಧಿಸಿದಂತೆ ರಾಜಣ್ಣ ಗೃಹಸಚಿವ ಪರಮೇಶ್ವರ್ ಅವರಿಗೂ ಸಹ ದೂರು ನೀಡಿದ್ರು.

ಇದಾದ ಬಳಿಕ ರಾಜಣ್ಣ ಪುತ್ರ ಎಂಎಲ್​ಸಿ ರಾಜೇಂದ್ರ ಹನಿಟ್ರ್ಯಾಪ್​ಗೆ ಬಂದವರು ಹತ್ಯೆಗೆ ಸಂಚು ರೂಪಸಿದ್ದರೆಂದು ಆರೋಪಿಸಿದ್ದರು. ಈ ಬೆನ್ನಲ್ಲೆ ರಾಜೇಂದ್ರ ಡಿಜಿಗೆ ದೂರು ನೀಡಿದ್ದರು. ಇದೀಗ ಎಂಎಲ್​ಸಿ ರಾಜೇಂದ್ರ ತುಮಕೂರು ಎಸ್​ಪಿಗೆ ದೂರು ಕೊಟ್ಟಿದ್ದಾರೆ.

ದೂರು ಕೊಟ್ಟ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಗೆ ದೂರು ನೀಡಿದ್ದೆ. ತುಮಕೂರು ಎಸ್​ಪಿಗೆ ದೂರು ಕೊಡುವಂತೆ ಸೂಚನೆ ಕೊಟ್ಟಿದ್ದರು. ನನ್ನ ಮಗಳ ಬರ್ತ್​ ಡೇ ದಿನದಂದು ನನ್ನ ಕೊಲೆಗೆ ಯತ್ನಸಿದ್ದರು. ಕೊಲೆಗೆ 70 ಲಕ್ಷ ಸುಪಾರಿ ನೀಡಲಾಗಿತ್ತು. ಈ ಕುರಿತು ದಾಖಲೆಗಳಿಗೆ, ಹೀಗಾಗಿ ಭದ್ರತೆ ಕೊಡಿ ಎಂದು ಪೋಲಿಸ್​ ಇಲಾಖೆಗೆ ಕೇಳಿದ್ದೇನೆ ಎಂದು ರಾಜೇಂದ್ರ ಹೇಳಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments