ಬಿಡಿಎ ಕಮಿಷನರ್ ಎನ್ ಜಯರಾಂ ಮಾಧ್ಯಮಗಳ ವಿರುದ್ಧ ತಡೆಯಾಜ್ಞೆ ತಂದಿದ್ದಾರೆ.ತಮ್ಮ ವಿರುದ್ಧ ಯಾವುದೇ ರೀತಿಯ ಆಕ್ಷೇಪಾರ್ಹ,ಮಾನಹಾನಿಕರ ವರದಿ, ಪ್ರಸಾರ ಮಾಡಬಾರದೆಂದು ಅವರು ತಡೆ ತಂದಿದ್ದಾರೆ.ಜಯರಾಂ ಅರ್ಜಿಗೆ CCH೨೫ ಮೂರನೇ ಹೆಚ್ಚುವರಿ ಸಿಟಿ ಸಿವಿಲ್ ಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.೨೦೦೪ ರ IAS ಬ್ಯಾಚಿನ ಅಧಿಕಾರಿಯಾದ ಜಯರಾಂ, ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯದರ್ಶಿ ಆಗಿ ಕೆಲಸ ಮಾಡುತಿದ್ದರು. ಕಳೆದ ಅಕ್ಟೊಬರ್ ನಲ್ಲಿ ಇವರನ್ನು BDA ಕಮಿಷನರ್ ಆಗಿ ವರ್ಗಾಯಿಸಲಾಗಿತ್ತು . BWSSB ಚೇರ್ಮನ್,KIADB ಸಿಇಓ ಹಾಗೂ ಬೆಳಗಾವಿ ಡಿಸಿಯಾಗಿ ಇವರು ಕಾರ್ಯನಿರ್ವಹಿಸಿದ್ದರು.