Top News

ಬೆಂಗಳೂರಿನ ವಾಹನ ಚಾಲಕರಿಗೆ ಬಿಗ್ ಅಲರ್ಟ್​! ಸಂಚಾರಿ ಜಂಟಿ ಆಯುಕ್ತರಿಂದ ಮಹತ್ವದ ನಿರ್ಧಾರ

ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಪಾನಮತ್ತ ಚಾಲನೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸಂಚಾರಿ ಜಂಟಿ ಆಯುಕ್ತ ಅನುಚೇತ್ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಕುಡಿದು ಚಾಲನೆ ಮಾಡಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಮಾಡಲಾಗುತ್ತಿದೆ. ಪ್ರತಿ ಗುರುವಾರದಿಂದ ಭಾನುವಾರ ಡಿಡಿ ಚೆಕಿಂಗ್ ಮಾಡುತ್ತೇವೆ ಎಂದು ಹೇಳಿದ್ದರೆ.

ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅನುಚೇತ್ ಅವರು, ಡ್ರಂಕ್ ಅಂಡ್ ಡ್ರೈವ್ ಇನ್ಸ್ ಪೆಕ್ಟರ್ ಮಟ್ಟದ ಅಧಿಕಾರಿ ಚೆಕ್ ಮಾಡಬೇಕು ಅಂತ ಇತ್ತು, ಈಗ ಪಿಎಸ್ ಐ ಮಟ್ಟದ ಅಧಿಕಾರಿಗಳು ಈಗ ಡ್ರಂಕ್ ಅಂಡ್ ಡ್ರೈವ್ ಚೆಕ್ ಮಾಡುತ್ತಾರೆ. ಸಿಸಿಟಿವಿ ಇರುವ ಕಡೆಯೇ ಡಿಡಿ ಕೇಸ್ ಚೇಕಿಂಗ್ ಮಾಡಬೇಕು. ಕರ್ತವ್ಯದಲ್ಲಿ ಪಾರದರ್ಶಕತೆ ತರುವ ದೃಷ್ಠಿಯಿಂದ ಸಿಸಿಟಿವಿ ಇರುವ ಕಡೆಯೇ ಚೇಕಿಂಗ್ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ.

Comments (0)

Your email address will not be published. Required fields are marked *

Back to top button