Tuesday, June 24, 2025
27.5 C
Bengaluru
Google search engine
LIVE
ಮನೆ#Exclusive NewsTop Newsಉಪಚುನಾವಣೆ ನೆಪದಲ್ಲಿ ನೇಮಕ ಪ್ರಕ್ರಿಯೆಗೆ ಬ್ರೇಕ್: ಇನ್ನೆರಡು ತಿಂಗಳಿಲ್ಲ ಕೆಪಿಸಿಸಿ ನಿಗಮದ ನೇಮಕ

ಉಪಚುನಾವಣೆ ನೆಪದಲ್ಲಿ ನೇಮಕ ಪ್ರಕ್ರಿಯೆಗೆ ಬ್ರೇಕ್: ಇನ್ನೆರಡು ತಿಂಗಳಿಲ್ಲ ಕೆಪಿಸಿಸಿ ನಿಗಮದ ನೇಮಕ

ಬೆಂಗಳೂರು: ರಾಜ್ಯದಲ್ಲಿ ಭರ್ಜರಿ ಬಹುಮತ ದೊಂದಿಗೆ ಅಧಿಕಾರದ ಗದ್ದುಗೆ ಏರಲು ಸಹಾಯ ಮಾಡಿದ ಕಾರ್ಯಕರ್ತರು ಉಪಚು ನಾವಣೆ ‘ಸ್ಥಾನಮಾನ’ಕ್ಕಾಗಿ ಮುಗಿಯುವ ಕಾಯುವ ನಿರ್ಮಾಣವಾಗಿದೆ. ತನಕ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯಮಟ್ಟದ ನಿಗಮ ಮಂಡಳಿಗಳಿಗೆ ಸದಸ್ಯತ್ವ ಸ್ಥಾನ ನೀಡುವ ಹಾಗೂ ಜಿಲ್ಲಾಮಟ್ಟದ ಪ್ರಮುಖ ನಿಗಮ ಮಂಡಳಿಗಳಿಗೆ ಸದಸ್ಯರನ್ನು ನೇಮಿಸುವ ಉದ್ದೇಶದಿಂದ ಸಮಿತಿಯೊಂದನ್ನು ರಚಿಸಿತ್ತು. ಆದರೀಗ ‘ಬಂಡಾಯ’ದ ಆತಂಕದಿಂದ ಉಪಚುನಾವಣೆ ಪ್ರಕ್ರಿಯೆ ನೆಪದಲ್ಲಿ ಮುಂದಿನ ಎರಡು ತಿಂಗಳ ಕಾಲ ಆಯ್ಕೆ ಪ್ರಕ್ರಿಯೆ ಮುಂದಕ್ಕೆ ಹಾಕಲು ರಾಜ್ಯ ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಹಲವು ಕ್ಷೇತ್ರಗಳಲ್ಲಿ ಒಂದು ಸ್ಥಾನಕ್ಕೆ ನಾಲೈದು ಆಕಾಂಕ್ಷಿಗಳಿದ್ದಾರೆ. ಈ ಹಂತದಲ್ಲಿ ಒಬ್ಬರಿಗೆ ಸ್ಥಾನ ನೀಡಿದರೆ, ಉಳಿದ ನಾಲ್ವರು ಬಂಡಾಯವೇಳುವ ಸಾಧ್ಯತೆಯಿದೆ. ಇದ ರಿಂದ ಪಕ್ಷದ ಸಂಘಟನೆಗೆ ಧಕ್ಕೆಯಾಗಲಿದೆ. ಆದ್ದರಿಂದ ಉಪಚುನಾವಣೆಯ ನೆಪದಲ್ಲಿ ನವೆಂಬರ್ ಅಂತ್ಯದವರೆಗೆ ಸಭೆಯನ್ನೇ ನಡೆಸದಿರಲು ನಾಯಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ವಿವಿಧ ನಿಗಮ ಮಂಡಳಿಗಳ ಸದಸ್ಯ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಕಾರ್ಯ ಕರ್ತರು ಇನ್ನೂ ನಾಲೈದು ತಿಂಗಳು ಕಾಯು ವುದು ಅನಿವಾರ್ಯ ಎನ್ನಲಾಗಿದೆ.

ಸಮಿತಿ ಸದಸ್ಯ ಸ್ಥಾನವನ್ನು ನೀಡುವುದಕ್ಕಾಗಿ ಕೆಪಿಸಿಸಿ ಅಧ್ಯಕ್ಷಡಿ.ಕೆ.ಶಿವಕುಮಾರ್ ರಚಿಸಿರುವ ಮಿತಿಯ ಅಧ್ಯಕ್ಷರಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ್, ವಸ್ಯರಾಗಿ ಸಂತೋಷ್ ಲಾಡ್, ಮಂಜುನಾಥ್ ಭಂಡಾರಿ ಸೇರಿ ಲವರಿದ್ದಾರೆ. ಉಪಚುನಾವಣೆ ಮುಗಿದ ಬಳಿಕವೂ ಸದಸ್ಯರ ಯ್ಕೆಗೆ ಕನಿಷ್ಠ ಒಂದೆರೆಡು ತಿಂಗಳು ಅಗತ್ಯ ಎನ್ನಲಾಗುತ್ತಿದೆ.

ಹಂಚಿಕೆಯ ಫಾರ್ಮುಲಾ ಸಿದ್ಧ: ಬಂಡಾಯಕ್ಕೆ ಅವಕಾಶ ನೀಡಬಾರದು ಎನ್ನುವ ಕಾರಣಕ್ಕೆ ರಾಜ್ಯಮಟ್ಟದ ಮಂಡಳಿಗಳ ಸದಸ್ಯ ಸ್ಥಾನಗಳಿಗೆ ಶಿಫಾರಸು ಮಾಡುವುದಕ್ಕೂ ಫಾರ್ಮುಲಾ ಸಿದ್ಧಪಡಿಸಲಾಗಿದೆ. ಸ್ಥಳೀಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರಿಗೆ ತಲಾ ಒಬ್ಬರನ್ನು, ಜಿಲ್ಲಾಧ್ಯಕ್ಷರು ಒಬ್ಬರನ್ನು ಶಿಫಾರಸು ಮಾಡಲು ಅವಕಾಶ ನೀಡಲಾಗಿದೆ. ಆದರೆ ಈ ಫಾರ್ಮುಲಾ ಹಲವು ಜಿಲ್ಲೆಗಳಲ್ಲಿ ಸಮಸ್ಯೆಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments