ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಜಂಟಿ ಕಾರ್ಯದರ್ಶಿಯಾಗಿ ಶ್ರೀ ದುರ್ಗೇಶ್ ವಾಸುದೇವ ಪೈ ಅವರನ್ನು ನೇಮಿಸಲಾಗಿದೆ. ದುರ್ಗೇಶ್ ವಾಸುದೇವ ಪೈ ಅವರು ಬಿಜೆಪಿ ಕರ್ನಾಟಕ ಫಲಾನುಭವಿ ಪ್ರಕೋಷ್ಟದ ರಾಜ್ಯ ಸಹಸಂಚಾಲಕರು ಕೂಡ ಆಗಿದ್ದಾರೆ. ಇವರ ಜೊತೆಗೆ ಶ್ರೀ ಮುರಳಿಧರ್ ಅವರನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ರಾಜ್ಯ ಜಂಟಿ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಅಖಿಲ ಕಾರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯಾಧ್ಯಕ್ಷರಾದ ಶ್ರೀ ರಘುನಾಥ್ ಅವರು, ಇಬ್ಬರನ್ನು ನೇಮಿಸಿ ಪ್ರಕಟಣೆ ಹೊರಡಿಸಿದ್ದಾರೆ.