Monday, June 23, 2025
26.6 C
Bengaluru
Google search engine
LIVE
ಮನೆಸುದ್ದಿರಾಮನವಮಿಯಂದೇ ದ್ವಾರಕೆ ತಲುಪಿದ ಅನಂತ್​ ಅಂಬಾನಿ

ರಾಮನವಮಿಯಂದೇ ದ್ವಾರಕೆ ತಲುಪಿದ ಅನಂತ್​ ಅಂಬಾನಿ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ನಿರ್ದೇಶಕ ಹಾಗೂ ಖ್ಯಾತ ಉದ್ಯಮಿ ಮುಕೇಶ್​ ಅಂಬಾನಿ ಕಿರಿಯ ಪುತ್ರ ಅನಂತ್​ ಅಂಬಾನಿ ಕಳೆದ ಮಾರ್ಚ್‌ 29ರಂದು ತೀರ್ಥಯಾತ್ರೆ ಹೊರಟಿದ್ದರು. ರಿಲಯನ್ಸ್ ಇಂಡಸ್ಟ್ರೀಸ್‌ನ ನಿರ್ದೇಶಕ ಅನಂತ್ ಅಂಬಾನಿ ಅವರು ತಮ್ಮ 30ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಜಾಮ್‌ನಗರದಿಂದ ದ್ವಾರಕದ ದ್ವಾರಕಾಧೀಶ ದೇವಸ್ಥಾನದವರೆಗೆ 170 ಕಿಲೋಮೀಟರ್ ದೂರದ ಪಾದಯಾತ್ರೆಯನ್ನು ಯಶಸ್ವಿಯಾಗಿ ಇಂದು (ಏಪ್ರಿಲ್ 6) ಮುಗಿಸಿದರು. ಈ ಆಧ್ಯಾತ್ಮಿಕ ಯಾತ್ರೆಯು ಮಾರ್ಚ್ 29ರಂದು ಆರಂಭವಾಗಿ, ರಾಮನವಮಿಯ ಶುಭ ದಿನವಾದ ಇಂದು ಅಂದರೆ ಏಪ್ರಿಲ್ 6ರಂದು ದ್ವಾರಕಾದಲ್ಲಿ ಕೊನೆಗೊಂಡಿತು. ಈ ಪಾದಯಾತ್ರೆಯಲ್ಲಿ ಅವರ ತಾಯಿ ನೀತಾ ಅಂಬಾನಿ ಮತ್ತು ಪತ್ನಿ ರಾಧಿಕಾ ಮರ್ಚೆಂಟ್ ಕೂಡ ಕೊನೆಯ ದಿನದಂದು ಸೇರಿಕೊಂಡರು.

ಅನಂತ್ ಅಂಬಾನಿ ಈ ಯಾತ್ರೆಯನ್ನು ತಮ್ಮ ಆಧ್ಯಾತ್ಮಿಕ ಪ್ರಯಾಣ ಎಂದು ಕರೆದಿದ್ದಾರೆ. “ನಾನು ಈ ಯಾತ್ರೆಯನ್ನು ದೇವರ ಹೆಸರಿನಲ್ಲಿ ಶುರುಮಾಡಿದೆ ಮತ್ತು ದೇವರ ಹೆಸರಿನಲ್ಲಿಯೇ ಮುಗಿಸಿದೆ. ದ್ವಾರಕಾಧೀಶನಿಗೆ ಧನ್ಯವಾದಗಳು. ನನ್ನ ಜೊತೆಗೆ ಈ ಯಾತ್ರೆಯಲ್ಲಿ ಭಾಗಿಯಾದವರಿಗೆ ಕೃತಜ್ಞನಾಗಿದ್ದೇನೆ,” ಎಂದು ಅವರು ಹೇಳಿದರು.

ಈ ಯಾತ್ರೆಯಲ್ಲಿ ಅವರು ಪ್ರತಿದಿನ ಸುಮಾರು 20 ಕಿಲೋಮೀಟರ್ ದೂರವನ್ನು ರಾತ್ರಿಯಲ್ಲಿ ನಡೆದುಕೊಂಡು ಹೋಗಿದ್ದರು. ದಾರಿಯಲ್ಲಿ ಹನುಮಾನ್ ಚಾಲೀಸಾ, ಸುಂದರಕಾಂಡ ಮತ್ತು ದೇವಿ ಸ್ತೋತ್ರಗಳನ್ನು ಪಠಿಸುತ್ತಾ ದ್ವಾರಕಾಕ್ಕೆ ತಲುಪಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments