Sunday, December 7, 2025
21.2 C
Bengaluru
Google search engine
LIVE
ಮನೆ#Exclusive NewsTop Newsಸಂಸತ್‌ ಅಧಿವೇಶನ ರಾಜಕೀಯ ನಾಟಕಗಳಿಗೆ ವೇದಿಕೆಯಾಗಬಾರದು- ಮೋದಿ

ಸಂಸತ್‌ ಅಧಿವೇಶನ ರಾಜಕೀಯ ನಾಟಕಗಳಿಗೆ ವೇದಿಕೆಯಾಗಬಾರದು- ಮೋದಿ

ನವದೆಹಲಿ: ಇಂದಿನ ಸಂಸತ್​​​ ಚಳಿಗಾಲದ ಅಧಿವೇಶನ ಆರಂಭವಾಗಿದೆ.. ಸಂಸತ್​​ ಭವನವು ಡ್ರಾಮಾ ಮಾಡುವ ವೇದಿಕೆ ಅಲ್ಲ. ರಾಷ್ಟ್ರದ ಹಿತಕ್ಕಾಗಿ ಚರ್ಚಿಸುವ ಪವಿತ್ರ ಸ್ಥಳ ಎಂದು ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಸಂದೇಶ ನೀಡಿದ್ದಾರೆ..

ಇಂದಿನಿಂದ ಅಧಿವೇಶನ ಆರಂಭವಾಗಿ ಡಿಸೆಂಬರ್​​​​ 19 ರಂದು ಕೊನೆಗೊಳ್ಳಲಿದೆ.. 18ನೇ ಲೋಕಸಭೆಯ 6ನೇ ಅಧಿವೇಶನ ಮತ್ತು ರಾಜ್ಯಸಭೆಯ 269ನೇ ಅಧಿವೇಶ ಆರಂಭವಾಗುವುದಕ್ಕೆ ಮುನ್ನ ಸಂಸತ್‌ ಭವನದ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಪ್ರತಿಪಕ್ಷಗಳಿಗೆ ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ನೆನಪಿಸಿದರು.

ಪ್ರಧಾನಿ ಈ ಬಾರಿ ವಿರೋಧ ಪಕ್ಷಗಳನ್ನು ನೇರವಾಗಿ ಗುರಿಯಾಗಿಸಿದ್ದು, ಕೆಲವು ಪಕ್ಷಗಳು ಇನ್ನೂ ತಮ್ಮ ಚುನಾವಣಾ ಸೋಲನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆ ಸೋಲಿನ ಹತಾಶೆ, ಆ ಆಘಾತ ಸಂಸತ್ತಿನ ವಾತಾವರಣವಾಗಬಾರದು ಎಂದು ತಿಳಿ ಹೇಳಿದರು. ಬಿಹಾರದ ಇತ್ತೀಚಿನ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ಉಲ್ಲೇಖಿಸಿ, ಜನರ ತೀರ್ಪನ್ನು ಒಪ್ಪಿಕೊಂಡು ಚರ್ಚೆಗೆ ಬರಬೇಕೆಂದು ವಿರೋಧಿಗಳಿಗೆ ಸಲಹೆ ನೀಡಿದರು.

ಈ ದೇಶದ ಜನತೆ ಯಾವಾಗಲೂ ಪ್ರಜಾಪ್ರಭುತ್ವವನ್ನು ಗೆಲ್ಲಿಸುತ್ತಾರೆ. ಈ ಬಾರಿಯೂ ಅದೇ ಆಗಿದೆ ಎಂದು ಬಿಹಾರದ ಫಲಿತಾಂಶದ ಮೂಲಕ ಪ್ರಧಾನಿ ತಮ್ಮ ಮಾತನ್ನು ಸ್ಪಷ್ಟಪಡಿಸಿದರು. ಇದು ಕೇವಲ ಬಿಹಾರದ ಮಾತಲ್ಲ, ಇಡೀ ದೇಶದಲ್ಲಿ ಜನರು ಅಭಿವೃದ್ಧಿ, ಸ್ಥಿರತೆ ಮತ್ತು ಆತ್ಮವಿಶ್ವಾಸಕ್ಕೆ ಮತ ಹಾಕುತ್ತಾರೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಸಾರಿದರು.

ಈ ಚಳಿಗಾಲದ ಅಧಿವೇಶನದಲ್ಲಿ ಹಲವು ಮಹತ್ವದ ವಿಷಯಗಳು ಚರ್ಚೆಗೆ ಬರಲಿವೆ. ಎಲ್ಲಾ ಪಕ್ಷಗಳು ರಚನಾತ್ಮಕವಾಗಿ ತೊಡಗಿಸಿಕೊಳ್ಳಬೇಕು ಎಂದು ನಾನು ಆಹ್ವಾನಿಸುತ್ತೇನೆ. ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಎತ್ತಿ, ದೇಶವನ್ನು ಮುಂದೆ ಕೊಂಡೊಯ್ಯೋಣ ಎಂದು ಪ್ರಧಾನಿ ಹೇಳಿದ್ದಾರೆ..

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments