Thursday, August 21, 2025
26.4 C
Bengaluru
Google search engine
LIVE
ಮನೆ#Exclusive NewsTop Newsಫ್ಯಾಷನ್ ಡಿಸೈನರ್​ ಸಂಧ್ಯಾ ಸಾವು ಪ್ರಕರಣ ಬೇಲ್​ ಗಾಗಿ ಹೈ ಕೋರ್ಟ್ ಮೆಟ್ಟಿಲೇರಿದ ಆರೋಪಿ

ಫ್ಯಾಷನ್ ಡಿಸೈನರ್​ ಸಂಧ್ಯಾ ಸಾವು ಪ್ರಕರಣ ಬೇಲ್​ ಗಾಗಿ ಹೈ ಕೋರ್ಟ್ ಮೆಟ್ಟಿಲೇರಿದ ಆರೋಪಿ

ಬೆಂಗಳೂರು: ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿ ಯುವತಿ ಸಂಧ್ಯಾರ ಪ್ರಾಣ ತೆಗೆದಿದ್ದ ಆರೋಪಿ ಧನುಷ್​ ಜಾಮೀನಿಗಾಗಿ ಹೈಕೋರ್ಟ್  ಮೆಟ್ಟಿಲು ಏರಿದ್ದಾನೆ. ಜಾಮೀನಿಗಾಗಿ ಉಚ್ಚ ನ್ಯಾಯಾಲಯದ ಮೆಟ್ಟಿಲು ಏರಿದ ಮೊದಲ ಅಪಘಾತ ಪ್ರಕರಣ ಇದಾಗಿದೆ. ಸಾಮಾನ್ಯವಾಗಿ ಅಪಘಾತ ಪ್ರಕರಣದಲ್ಲಿ ಸ್ಟೇಷನ್ ಕೋರ್ಟ್​​ನಲ್ಲಿ ಬೇಲ್ ಸಿಗುತ್ತೆ. ಆದರೆ, ಸೆಷನ್ಸ್ ಕೋರ್ಟ್​ನಲ್ಲೂ ಧನುಷ್ ಜಾಮೀನು‌ ಅರ್ಜಿ ವಜಾಗೊಂಡಿದೆ.  ಒಂದು ವೇಳೆ ಬಂಧನವಾದರೂ ಮ್ಯಾಜಿಸ್ಟೇಟ್ ಕೋರ್ಟ್​ನಲ್ಲಿ ಜಾಮೀನು ಸಿಗುತ್ತೆ. ಆದರೆ, ಸಂಧ್ಯಾ ಅಪಘಾತ ಪ್ರಕರಣದಲ್ಲಿ ಆರೋಪಿ ಧನುಷ್​ಗೆ ಒಂದು ತಿಂಗಳಾದರೂ ಜಾಮೀನು‌ ಸಿಕ್ಕಿಲ್ಲ. ಹೀಗಾಗಿ ಧನುಷ್​ ಹೈಕೋರ್ಟ್ ಮೆಟ್ಟಿಲು ಏರಿದ್ದಾನೆ.

ಏನಿದು ಪ್ರಕರಣ

ಫ್ಯಾಷನ್ ಡಿಸೈನರ್ ಆಗಿದ್ದ ಸಂಧ್ಯಾ ಅವರು ಬಟ್ಟೆ ಅಂಗಡಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ನವೆಂಬರ್​​ 02 ರಂದು ಕೆಲಸ ಮುಗಿಸಿ ರಾತ್ರಿ 7 ಗಂಟೆ ಸುಮಾರಿಗೆ ಕೆಂಗೇರಿ ಬಸ್‌ ನಿಲ್ದಾಣದ ಬಳಿ ರಸ್ತೆ ದಾಟುತ್ತಿದ್ದರು. ಈ ವೇಳೆ ಮಧ್ಯದ ಅಮಲಿನಲ್ಲಿ ಬೆಂಜ್​ ಕಾರು ಚಲಾಯಿಸಿಕೊಂಡು ಬಂದ ಧನುಷ್​ ಕೆಂಗೇರಿ ಬಸ್ ನಿಲ್ದಾಣದ ಬಳಿ ಬಂದಾಗ ಹಂಪ್​ ಅನ್ನೂ ಎಗರಿಸಿ ಸಂಧ್ಯಾ ಅವರಿಗೆ ಡಿಕ್ಕಿ ಹೊಡೆದಿದ್ದನು.

ಕಾರು ಸಂಧ್ಯಾ ಅವರನ್ನು 5 ಮೀಟರ್ ಉಜ್ಜಿಕೊಂಡು ಹೋಗಿತ್ತು. ಕಾರು ಡಿಕ್ಕಿ ಹೊಡೆದಿದ್ದರಿಂದ ಕೆಳಗೆ ಬಿದ್ದ ಸಂಧ್ಯಾ ತಲೆಗೆ ತೀವ್ರ ಪೆಟ್ಟಾಗಿ, ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಅಪಘಾತದ ಬಳಿಕ ಧನುಷ್​ ಪರಾರಿಯಾಗಲು ಯತ್ನಿಸಿದ್ದನು. ಆಗ, ಸ್ಥಳೀಯರು ಧನುಷ್​​ನನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದರು. ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿ ಧನುಷ್​​ನನ್ನು ಬಂಧಿಸಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments