Wednesday, April 30, 2025
30.3 C
Bengaluru
LIVE
ಮನೆಸಿನಿಮಾರಿಯಾಲಿಟಿ ಶೋ ಒಂದರಲ್ಲಿ ಶ್ರಮಿಕರಿಗೆ ಅವಮಾನ ; ನಟ ರಮೇಶ್ ಅರವಿಂದ್ ಸೇರಿ ಹಲವರ ವಿರುದ್ಧ...

ರಿಯಾಲಿಟಿ ಶೋ ಒಂದರಲ್ಲಿ ಶ್ರಮಿಕರಿಗೆ ಅವಮಾನ ; ನಟ ರಮೇಶ್ ಅರವಿಂದ್ ಸೇರಿ ಹಲವರ ವಿರುದ್ಧ ದೂರು

ಬೆಂಗಳೂರು: ಪಟ್ಟಣದ ಫ್ರೆಂಡ್ಸ್ ದ್ವಿಚಕ್ರ ವಾಹನ ವರ್ಕ್ ಶಾಪ್ ಮಾಲೀಕರು ಹಾಗು ತಂತ್ರಜ್ಞರ ಕ್ಷೇಮಾಭಿವೃದ್ಧಿ ಸಂಘ ದ ಪದಾಧಿಕಾರಿಗಳು ಹಾಗು ಸದಸ್ಯರು, ಕನ್ನಡದ ಖಾಸಗಿ ವಾಹಿನಿಯ ರಿಯಾಲಿಟಿ ಶೋ ಒಂದರ ನಿರ್ಮಾಪಕ, ನಿರ್ದೇಶಕ, ಸ್ಪರ್ಧಿ ಗಗನ, ನಿರೂಪಕಿ ಅನುಶ್ರೀ, ತೀರ್ಪುಗಾರರಾದ ನಟ ರಮೇಶ್ ಅರವಿಂದ್, ಪ್ರೇಮ, ಹಾಗು ಇತರರ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ರಿಯಾಲಿಟಿ ಶೋ ಸ್ಪರ್ಧಿ ಗಗನ ದೃಶ್ಯವೊಂದರ ನಟನೆಯಲ್ಲಿ ಮ್ಯಾಕಾನಿಕ್ ನನ್ನು ಮದುವೆಯಾದರೆ ಗ್ರೀಸ್ ತಿಂದುಕೊಂಡು ಬದುಕಲಾಗದು ಎಂಬ ಮಾತನ್ನು ಆಡಿದ್ದು, ಈ ಮಾತಿನಿಂದ ವೃತ್ತಿಪರ ಮೆಕ್ಯಾನಿಕ್ ಸಮುದಾಯಕ್ಕೆ ನೋವಾಗಿದೆ.

ಶ್ರಮಿಕ ವರ್ಗದ ದುಡಿಮೆ, ವೃತ್ತಿ ಬಗ್ಗೆ ಕುಹೂಕ, ನಿಂದನೆಯ ಮಾತು ಆಡಿರುವ ಸ್ಪರ್ಧಿ ಹಾಗು ಇದಕ್ಕೆ ಉತ್ತೇಜನ ನೀಡಿದವರ ವಿರುದ್ಧ ದೂರು ದಾಖಲಿಸಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments