ನಟ ಸಹಾಸ ಸಿಂಹ ವಿಷ್ಣುವರ್ಧನ್ ಸಮಾಧಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ನಟ ಸತೀಶ್ ನೀನಾಸಂ ಬೆಂಬಲ ಸೂಚಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ವಿಷ್ಣು ಸಮಾಧಿಗಾಗಿ ಹೋರಾಟ ಮಾಡಬೇಕಾಗಿರುವುದು ಬೇಸರದ ವಿಷಯ. ಇದು ಬರೀ ಸಮಾಧಿಯ ವಿಷಯವಲ್ಲ ಅಭಿಮಾನಿಗಳಿಗಾಗುವ ನೋವು. ಬೇಗ ಇದನ್ನು ಸರ್ಕಾರ ಬಗೆಹರಿಸಲಿ, ಅಭಿಮಾನಿಗಳ ಹೋರಾಟದ ಜೊತೆ ನಾವಿದ್ದೇವೆ ಎಂದು ನಟ ಸತೀಶ್ ನೀನಾಸಂ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
