ರಾಜ್ಯ

ಲೋಕಾಯುಕ್ತ ಸಂಸ್ಥೆಗೆ ತೆರಳಲು ಇನ್ಸ್​​ಪೆಕ್ಟರ್ಸ್​​​​​ ಹಿಂದೇಟು…!!!

ಬೆಂಗಳೂರು : ಕಳೆದ ಬಾರಿ ಇನ್ಸ್​​​ಪೆಕ್ಟರ್​​​ಗಳ ವರ್ಗಾವಣೆ ಆದಂತಹ ಸಂದರ್ಭದಲ್ಲಿ ಅನೇಕರು ತಮ್ಮ ಸ್ಥಳಕ್ಕೆ 40 ದಿನಗಳಾದ್ರೂ ವರದಿ ಮಾಡಿಕೊಂಡಿಲ್ಲ. ಅದರಂತೆ ಈ ವರ್ಗಾವಣೆ ಆದೇಶದಲ್ಲಿ ಸುಮಾರು 15 ಜನ ಇನ್ಸ್​​ಪೆಕ್ಟರ್​​​ಗಳು ಲೋಕಾಯುಕ್ತಕ್ಕೆ ವರ್ಗಾವಣೆ ಆದರೂ ಈವರೆಗೂ ಕೂಡ ವರದಿ ಮಾಡಿಕೊಂಡಿಲ್ಲ.

ಡಿಜಿ-ಐಜಿಪಿ ನೋಟಿಸ್​ಗೂ ನೋ ಕೇರ್​​..!

ಲೋಕಾಯುಕ್ತ ಸಂಸ್ಥೆ ಕಳೆದ ಎರಡು ವರ್ಷಗಳ ಹಿಂದೆ ಮತ್ತೆ ತನ್ನ ಪವರ್​​​ ಪಡೆದುಕೊಂಡಿತ್ತು. ಎಸಿಬಿಯನ್ನ ಸಂಪೂರ್ಣವಾಗಿ ನಿಷ್ಕ್ರೀಯಗೊಳಿಸಿ ಲೋಕಾಯುಕ್ತಕ್ಕೆ ಹೆಚ್ಚಿನ ಪವರ್​​ ನೀಡಲು ಅಂದಿನ ಬಿಜೆಪಿ ಸರ್ಕಾರ ನಿರ್ಧಾರ ಮಾಡಿತ್ತು. ಲೋಕಾಯುಕ್ತ ಬಲವನ್ನ ಇನ್ನಷ್ಟು ಇಮ್ಮಡಿಗೊಳಿಸಲು ಕಳೆದ ತಿಂಗಳು ಇನ್ಸ್​​ಪೆಕ್ಟರ್​​​ಗಳನ್ನ ವರ್ಗಾವಣೆ ಮಾಡಿತ್ತು. ಆದರೆ ಈವರೆಗೂ ಕೂಡ ವರ್ಗಾವಣೆಗೊಂಡ ಒರ್ವ ಇನ್ಸ್​​ಪೆಕ್ಟರ್​​ ಕೂಡ ಕರ್ತವ್ಯಕ್ಕೆ ಹಾಜರಾಗದೇ ಇರೋದು ಲೋಕಾಯುಕ್ತಕ್ಕೆ ಬಹುದೊಡ್ಡ ಹೊಡೆತ ಬಿದ್ದಿದೆ..

ಲೋಕಾಯುಕ್ತದಲ್ಲಿ ಹೆಚ್ಚಿದ ಕಾರ್ಯಾಭಾರ..!

ಕರ್ನಾಟಕದಲ್ಲಿ ಎಸಿಬಿ ಬಂದ್​​ ಮಾಡಿ ಲೋಕಾಯುಕ್ತ ರಚನೆ ಆದ ಬಳಿಕ ಹಲವು ಕೇಸ್​​ಗಳು ದಾಖಲಾದವು, ಪ್ರತಿದಿನ ದೂರುಗಳ ಸಂಖ್ಯೆಯು ಕೂಡ ಹೆಚ್ಚಾಗ ತೊಡಗಿತು. ಇದರಿಂದ ಟ್ರಾನ್ಸ್​​ಫಾರ್​​ ಆದಂತಹ ಇನ್ಸ್​​​ಪೆಕ್ಟರ್​​​ಗಳು ಕರ್ತವ್ಯಕ್ಕೆ ಹಾಜರಾದ್ರೆ ಲೋಕಾಯುಕ್ತಕ್ಕೆ ಇನ್ನಷ್ಟು ವೇಗ ಪಡೆದುಕೊಳ್ಳುತ್ತದೆ ಅನ್ನೋ ದೃಷ್ಠಿಯಲ್ಲಿ ಈ ವರ್ಗಾವಣೆ ಮಾಡಲಾಗಿತ್ತು. ಯಾವೊಬ್ಬ ಪೊಲೀಸ್​​​ ಇನ್ಸ್​​ಪೆಕ್ಟರ್ ಕರ್ತವ್ಯಕ್ಕೆ ಹಾಜರಾಗದೇ ಇರೋದು ಸರ್ಕಾರಕ್ಕೆ ನಿಜವಾಗಿಯೂ ದೊಡ್ಡ ಸವಾಲಾಗಿದೆ.

Comments (0)

Your email address will not be published. Required fields are marked *

Back to top button