ನವದೆಹಲಿ – ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿವೆ. ಬೆಳಗಾವಿಯಲ್ಲಿ ವಂಟನೂರಿನಲ್ಲಿ ಮಹಿಳೆಯನ್ನ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾರೆ, ಈ ಘಟನೆ ಅತ್ಯಂತ ಹೀನಾಯ ಕೃತ್ಯವಾಗಿದೆ. ಇದರ ಕುರಿತಾಗಿ ಐವರು ಸದಸ್ಯರ ಸತ್ಯಶೋಧನ ಸಮಿತಿ ರಚಿಸಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ತಿಳಿಸಿದ್ದಾರೆ.

ಇನ್ನೂ ಈ ಸಮಿತಿ ಐವರು ಲೋಕಸಭಾ ಮಹಿಳಾ ಸದಸ್ಯರಿದ್ದು, ಘಟನೆ ನಡೆದ ಬೆಳಗಾವಿ ಜಿಲ್ಲೆಯ ವಂಟನೂರಿಗೆ ತೆರಳಿ ಮಾಹಿ ಕಲೆಹಾಕಲಿದ್ದಾರೆ. ವದರಿ ಸಿದ್ದಪಡಿಸಿದ ನಂತರ ಐವರು ಸದಸ್ಯರು ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ಸಿಂಗ್ ರವರಿಗೆ ವರದಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಸತ್ಯಶೋಧನ ಸಮಿತಿಯಲ್ಲಿ ಸಂಸದೆಯರಾದ ಸುನೀತಾ ದುಗ್ಗಲ್, ಅರ್ಪಿತಾ ಸಾರಂಗಿ, ಲಾಕೇಟ್ ಚಟರ್ಜಿ, ರಂಜೀತಾ ಕೋಲಿ, ಪಕ್ಷ ರಾಷ್ಟ್ರೀಯ ಕಾರ್ಯದರ್ಶಿ ಆಶಾ ಲಾಕ್ರಾ ಸಮಿತಿಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.