ಬೆಳಗಾವಿ : ಕರ್ನಾಟಕ ಬಿಜೆಪಿ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಎಚ್ಚರಿಕೆ ಕೊಟ್ಟ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್.ಕರ್ನಾಟಕದಲ್ಲಿ ಒಂದೇ ಒಂದು ಸಭೆ ಮಾಡಲು ಬಿಡಲ್ಲ ಇದು ನಮ್ಮ ಪ್ರತಿಜ್ಞೆ ಎಂದ ಡಿಕೆ ಶಿವಕುಮಾರ್.
ಇಂದು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶಕ್ಕೆ ಬಿಜೆಪಿ ಮಹಿಳಾ ಕಾರ್ಯಕರ್ತರು ವೇದಿಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಸಿಎಂ ಸಿದ್ದರಾಮಯ್ಯ ಅವರು ಎಎಸ್ಪಿ ಮೇಲೆ ಕೈ ಎತ್ತಲು ಹೋಗಿದ್ದರು.ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಅವರು,ಬಿಜೆಪಿ ನಾಯಕರು ನಿಮ್ಮ ಕಾರ್ಯಕರ್ತರಿಗೆ ಬುದ್ದಿ ಹೇಳಿದ್ರೆ ಒಳ್ಳೆಯದು,ಇದೇ ರೀತಿ ಮಾಡಿದ್ರೆ ಒಂದೇ ಒಂದು ಸಭೆ ಮಾಡಲು ಬೀಡುವುದಿಲ್ಲ ಇದು ನಮ್ಮ ಪ್ರತಿಜ್ಞೆ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ ಡಿಸಿಎಂ ಡಿಕೆ ಶಿವಕುಮಾರ್.