ಚಿತ್ರದುರ್ಗ : ಬಾರ್ ಆಂಡ್ ರೆಸ್ಟೋರೆಂಟ್ನಲ್ಲಿ ಸಬ್ಇನ್ಸ್ ಪೆಕ್ಟರ್ ಪಿಸ್ತೂಲ್ ಮತ್ತು ಜೀವಂತ ಹತ್ತು ಗುಂಡುಗಳು ಮರೆತು ಹೋಗಿ ಈದೀಗ ಪಿಸ್ತೂಲ್ ಕಾಣೆಯಾದ ಘಟನೆ ಚಿತ್ರದುರ್ಗದ ಜಾನುಕೊಂಡದ ಬಳಿ ನಡೆದಿದೆ.

ಬೆಂಗಳೂರಿನ ಕೆಆರ್ ಪುರಂನ ಪೊಲೀಸ್ ಸಬ್ಇನ್ಸಪೆಕ್ಟರ್ ಕಲ್ಲಪ್ಪ ಮತ್ತು ಇಬ್ಬರು ಪೊಲೀಸ್ ಕಾನ್ಸ್ ಟೇಬಲ್ಗಳಿಗೆ ಸೇರಿದ ಪಿಸ್ತೂಲ್ ಹಾಗೂ ಗುಂಡುಗಳು ಇವಾಗಿದ್ದವು. ಪ್ರಕರಣವೊಂದರ ಆರೋಪಿಗಾಗಿ ಶಿವಮೊಗ್ಗ ಹಾಗೂ ದಾವಣಗೆರೆಗೆ ಬಂದಿದ್ದ ಪೊಲೀಸರು ಜಾನುಕೊಂಡದ ಬಾರ್ ರೆಸ್ಟೋರೆಂಟ್ನಲ್ಲಿ ಊಟ ಮುಗಿಸಿ ಸರ್ವೀಸ್ ಪಿಸ್ತೂಲ್ನ್ನು ಪೊಲೀಸರು ಮರೆತು ಹೋಗಿದ್ದರು. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ನು ಸಬ್ಇನ್ಸ್ಪೆಕ್ಟರ್ ಮರೆತು ಹೋಗಿದ್ದ ಪಿಸ್ತೂಲ್ ಆಟೋ ಚಾಲಕನೊಬ್ಬನಿಗೆ ಸಿಕ್ಕಿ ಅವರು ಅದನ್ನು ಹೊಳಲ್ಕೆರೆ ಠಾಣೆಗೆ ಒಪ್ಪಿಸಿದ್ದಾರೆ.