ದೆಹಲಿ : ಜಮ್ಮು & ಕಾಶ್ಮೀರದ ಪಹಲ್ಗಾಮ್ ದಾಳಿಯಿಂದ ಭಾರತ ದೇಶದ ಪ್ರಜೆಗಳ ರಕ್ತ ಕುದಿಯುತ್ತಿದೆ.ದಾಳಿಕೋರರಿಗೆ ಕಠಿಣಾತಿ ಕಠಿಣ ಶಿಕ್ಷೆ ಕೋಡುತ್ತೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದಿನ (ಏ.27-2025) ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಪಹಲ್ಗಾಮ್ನಲ್ಲಿ ದಾಳಿ ಮಾಡಿದ ಉಗ್ರರಿಗೆ ತಕ್ಕ ಪಾಠ ಕಲಸ್ತೀವಿ ಬೀಡಲ್ಲ,ಭಯೋತ್ಪಾದಕರಿಗೆ ಕಠಿಣ ಶಿಕ್ಷೆ ಕೊಡ್ತೇವೆ ,ಉಗ್ರರ ದಾಳಿಗೆ ಬಲಿಯಾದವರಿಗೆ ಸರಿಯಾದ ನ್ಯಾಯ ಕೋಡಿಸುವ ಕೆಲಸ ಮಾಡ್ತೇವೆ ಎಂದು ಮೋದಿ ಮನ್ ಕಿ ಬಾತ್ನಲ್ಲಿ ಶಪಥ ಮಾಡಿದ್ದಾರೆ.
ಜಮ್ಮು& ಕಾಶ್ಮೀರದ ಅಭಿವೃದ್ದಿ ಸಹಿಲಾಗದೇ ಪಹಲ್ಗಾಮ್ ಮೇಲೆ ದಾಳಿ ಮಾಡಿದ್ದಾರೆ.ಕಾಶ್ಮೀರ ನಾಶ ಮಾಡಲು ಭಾರತದ ಶತ್ರು ರಾಷ್ಟ್ರಗಳು ಷಡ್ಯಂತ್ರ ಮಾಡುತ್ತಿವೆ ಎಂದು ನರೇಮದ್ರ ಮೋದಿ ಆಕ್ರೋಶಭರಿತವಾಗಿ ಮಾತನಾಡಿದ್ದಾರೆ.