Wednesday, August 20, 2025
18.9 C
Bengaluru
Google search engine
LIVE
ಮನೆ#Exclusive NewsTop Newsಧರ್ಮಸ್ಥಳ ಪ್ರಕರಣ; ಶೀಘ್ರ ಎಸ್​ಐಟಿ ರಚಿಸುವಂತೆ ಸಿಎಂಗೆ ನಟ ಪ್ರಕಾಶ್​ ರಾಜ್​ ಒತ್ತಾಯ

ಧರ್ಮಸ್ಥಳ ಪ್ರಕರಣ; ಶೀಘ್ರ ಎಸ್​ಐಟಿ ರಚಿಸುವಂತೆ ಸಿಎಂಗೆ ನಟ ಪ್ರಕಾಶ್​ ರಾಜ್​ ಒತ್ತಾಯ

ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಸಂಬಂಧ ಎಸ್​ಐಟಿ ರಚನೆ ಮಾಡಿ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಸಿಎಂ ಸಿದ್ದರಾಮಯ್ಯಗೆ ನಟ ಪ್ರಕಾಶ್​ ರಾಜ್​ ಮನವಿ ಮಾಡಿದ್ದಾರೆ.

ಧರ್ಮಸ್ಥಳ ದೂರು ಸಂಬಂಧಿಸಿದಂತೆ ಪೊಲೀಸರು ತನಿಖೆ ಮಾಡುತ್ತಿದ್ದು ವರದಿ ಬಂದ ಬಳಿಕ ಏನು ಮಾಡಬೇಕು ಎಂಬ ಬಗ್ಗೆ ನೋಡುತ್ತೇವೆ. ಅಗತ್ಯಬಿದ್ದರೆ ಎಸ್​ಐಟಿ ರಚನೆ ಮಾಡುತ್ತೆವೆ ಎಂದು ಶುಕ್ರವಾರ ಸಿಎಂ ಸಿದ್ದರಾಮಯ್ಯ ಹೇಳಿದ್ದರು.

ಈ ಬಗ್ಗೆ  ಟ್ವೀಟ್​ ಮೂಲಕ ಪ್ರತಿಕ್ರಿಯೆ ನೀಡಿರುವ ಪ್ರಕಾಶ್​ ರಾಜ್​​ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮ್ಮ ಮಾತಿನ ಮೇಲೆ ನಮಗೆ ಭರವಸೆಯಿದೆ. ಆದರೆ ಈ ಧಾರುಣ ಹಂತಕರನ್ನು, ಅವರನ್ನು ಕಾಪಾಡುತ್ತಿರುವ ಹೀನ ರಾಕ್ಷಸರನ್ನು ನಂಬುವ ಹಾಗಿಲ್ಲ. ದಯವಿಟ್ಟು ತನಿಖೆ ವಿಳಂಬವಾಗಿ ಸಾಕ್ಷಾಧಾರಗಳು ನಾಶವಾಗದಂತೆ ತುರ್ತು ಕ್ರಮ ತೆಗೆದುಕೊಳ್ಳಿ, ಆದಷ್ಟು ಬೇಗ ಎಸ್​ಐಟಿ ರಚನೆ ಮಾಡಿ ಮತ್ತು ಈವರೆಗೆ ದಾರಿ ತಪ್ಪಿದ ಅಧಿಕಾರಿಗಳ ಮೇಲೆ ತೀವ್ರ ಕ್ರಮ ಕೈಗೊಳ್ಳಿ ಎಂದು ನಟ ಪ್ರಕಾಶ್​ ರಾಜ್​ ಮನವಿ ಮಾಡಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments