Monday, June 23, 2025
26.6 C
Bengaluru
Google search engine
LIVE
ಮನೆUncategorizedತಿರುಪತಿ ಲಾಡು ಪ್ರಸಾದ ಪ್ರಕರಣ- ಸಿ.ಬಿ.ಐ.ತನಿಖೆಗೆ ವಹಿಸಬೇಕು ಎಂದು ಸಹಿ ಸಂಗ್ರಹ ಅಭಿಯಾನ: ಕೆ.ಗೋಪಾಲಯ್ಯ

ತಿರುಪತಿ ಲಾಡು ಪ್ರಸಾದ ಪ್ರಕರಣ- ಸಿ.ಬಿ.ಐ.ತನಿಖೆಗೆ ವಹಿಸಬೇಕು ಎಂದು ಸಹಿ ಸಂಗ್ರಹ ಅಭಿಯಾನ: ಕೆ.ಗೋಪಾಲಯ್ಯ

ಬೆಂಗಳೂರು: ಶಂಕರಮಠ ಅವನಿ ಶಂಕರಮಠ ಸಭಾಂಗಣದಲ್ಲಿ ರಾಷ್ಟ್ರೀಯ ಪ್ರಜ್ಞಾನ ಪ್ರತಿಷ್ಠಾನವತಿಯಿಂದ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಲಾಡು ಪ್ರಸಾದದಲ್ಲಿ ಪ್ರಾಣಿಯ ಕೊಬ್ಬು ಬೆರಸಿದ ಪ್ರಕರಣ ಸಿಬಿಐ ತನಿಖೆಗೆ ವಹಿಸಿ ಎಂದು ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದವರ ವಿರುದ್ದ ಕ್ರಮ ಕುರಿತು ಜನಜಾಗೃತಿ ಸಭೆ ಮತ್ತು ಸಿಬಿಐ ತನಿಖೆಗೆ ಒತ್ತಾಯಿಸಿ ಸಹಿ ಸಂಗ್ರಹ ಚಳುವಳಿ.

ಕಾರ್ಯಕ್ರಮದಲ್ಲಿ ಮಾಜಿ ಸಚಿವರು ಶಾಸಕರಾದ ಕೆ.ಗೋಪಾಲಯ್ಯರವರು, ಮಾಜಿ ಶಾಸಕರಾದ ನೆ.ಲ. ನರೇಂದ್ರ ಬಾಬು, ಕೇಂದ್ರ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷರಾದ ಸಪ್ತಗಿರಿಗೌಡ, ಹಿಂದೂಪರ ಹೋರಾಟಗಾರ ಹರ್ಷ ಮುತಾಲಿಕ್ ರವರು, ರಾಷ್ಟ್ರಿಯ ಪ್ರಜ್ಞಾನ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ|| ಎಸ್. ನಾಗೇಂದ್ರ ಜೋಯಿಸ್, ಬಿಜೆಪಿ ಮುಖಂಡರಾದ ಜಯರಾಮಣ್ಣ, ರಾಘವೇಂದ್ರ, ಶಿವಾನಂದಮೂರ್ತಿರವರು ಹಾಗೂ ಅಗಮ ಪಂಡಿತರು, ಅರ್ಚಕರು ಹಾಗೂ ಹಿಂದೂ ಪರ ಹೋರಾಟಗಾರರು ಭಾಗವಹಿಸಿದ್ದರು.

ಶಾಸಕರಾದ ಕೆ.ಗೋಪಾಲಯ್ಯರವರು ಮಾತನಾಡಿ ತಿರುಪತಿ ಲಾಡು ತಯಾರಿಕೆಯಲ್ಲಿ ಬಳಸಿದ ತುಪ್ಪದಲ್ಲಿ ದನದ ಕೊಬ್ಬ ತುಪ್ಪ ಸರಬರಾಜು ಮಾಡಿದರು ಯಾರು ಎಂಬ ತನಿಖೆಯಾಗಬೇಕು.

ವಿಶ್ವದಲ್ಲಿ ಕೊಟ್ಯಂತರ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದೆ, ಹಲವಾರು ಡೊಡ್ಡ, ಡೊಡ್ಡ ದೇವಸ್ಥಾನಗಳಲ್ಲಿ ಪ್ರಸಾದ ಪರಿಶುದ್ದತೆ ಪರೀಕ್ಷೆ ಮಾಡಬೇಕು ಹಾಗೂ ಅಂತರಾಷ್ಟ್ರಿಯ ಜಾಲ ಇರುವ ಸಾಧ್ಯತೆ ಇರುವುದರಿಂದ ರಾಷ್ಟ್ರಪತಿಗಳು ಮತ್ತು ಪ್ರಧಾನಿ ಮಂತ್ರಿಗಳು ಮಧ್ಯಪ್ರವೇಶ ಮಾಡಿ ಸಿ.ಬಿ.ಐ. ವಹಿಸಬೇಕು ಎಂದು ಸಾರ್ವಜನಿಕರಿಂದ ಸಹಿ ಸಂಗ್ರಹ ಮಾಡಲಾಗುತ್ತಿದೆ ಎಂದು ಹೇಳಿದರು.

ನೆ.ಲ.ನರೇಂದ್ರಬಾಬು ರವರು ಮಾತನಾಡಿ ಧಾರ್ಮಿಕ ಶ್ರದ್ದೆಗೆ ಧಕ್ಕೆ ಬಂದಾಗ ನಾವು ಹೋರಾಟ ಮತ್ತು ಪ್ರತಿಕ್ರಿಯೆ ನೀಡವುದು ನಮ್ಮ ಧರ್ಮ. ತಿರುಪತಿ ಲಾಡು ಪ್ರಸಾದ ಎಲ್ಲರು ಪ್ರಸಾದ ರೂಪದಲ್ಲಿ ತಿಂದಿದ್ದಾರೆ. ಪ್ರಸಾದದಲ್ಲಿ ದನದ ಕೊಬ್ಬು ಬೆರೆಸಿದ್ದಾರೆ ಕೊಟ್ಯಂತರ ಜನರ ಭಕ್ತಿ ಭಾವನೆ ಜೊತೆಯಲ್ಲಿ ಚಲ್ಲಾಟವಾಡಿದ್ದಾರೆ. ಅತಿ ಕಡಿಮೆ ಬೆಲೆ ತುಪ್ಪ ಖರೀದಿ ಮಾಡಿದ್ದಾರೆ, ತುಪ್ಪ ಅಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಲು ಸಾಧ್ಯವಿಲ್ಲ, ಕಳಬೆರಕೆ ತುಪ್ಪದಿಂದ ಲಾಡು ತಯಾರಿಕೆ ಮಾಡಿದ್ದಾರೆ. ಹಿಂದೂ ಸಮಾಜ ಮೇಲೆ ತಲಾ ತರಂತರದಿಂದ ಶೋಷಣೆ ಮಾಡುತ್ತಿದ್ದಾರೆ, ಹಿಂದೂಗಳ ರಕ್ಷಣೆಗೆ ಸಂಘಟನೆ ಮಾಡಬೇಕಾಗಿದೆ ಎಂದು ಹೇಳಿದರು.

ಡಾ||ಎಸ್.ನಾಗೇಂದ್ರ ಜೋಯಿಸ್ ರವರು ಮಾತನಾಡಿ ಹಿಂದೂ ದೇವಾಲಯದ ಆಡಳಿತ ಮಂಡಳಿ ನಿರ್ವಹಣೆ ಸಂಪೂರ್ಣ ಹಿಂದೂ ಧರ್ಮದವರ ಬಳಿ ಇರಬೇಕು, ರಾಜ್ಯದಲ್ಲಿರುವ ಹಿಂದೂ ದೇವಾಲಯಗಳಲ್ಲಿ ಕುಡಿಯುವ ನೀರು, ಅಡುಗೆ ಕೋಣೆ ಮೂಲಭೂತ ಸೌಕರ್ಯ ಸಮರ್ಪಕವಾಗಿ ಸಿಗುವಂತೆ ಆಗಲಿ. ಹಿಂದೂ ದೇವಾಲಯದಲ್ಲಿ ಅನ್ಯ ಧರ್ಮಿಕರಿಗೆ ವ್ಯಾಪಾರ, ವಹಿವಾಟು ನಡೆಸದಂತೆ ನಿರ್ಭಂದ ಹಾಕಬೇಕು.

ತಿರುಪತಿ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು, ಮೀನಿನ ಬೆರೆಕೆಯಾಗಿರುವುದರಿಂದ ವಿಶ್ವಾದ್ಯಂತ ವೆಂಕಟೇಶ್ವರ ಭಕ್ತರಿಗೆ ಬಾರಿ ನೋವುಂಟಗಾಗಿದೆ. ತಿರುಪತಿಯಲ್ಲಿ ಅನಾಚರ ಹಿಂದೆ ವ್ಯಕ್ತಿಗಳ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಮನವಿ ಎಂದು ಹೇಳಿದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments