ರಾಜ್ಯದ ಪ್ರಬಲ ಹೋರಾಟಗಾರ ಮತ್ತು ಪ್ರಖ್ಯಾತ ಸ್ವಾಮೀಜಿಯೊಬ್ಬರ ಸುತ್ತ ಸುತ್ತುತ್ತಿರುವ ವಿವಾದ ಈಗ ಹೊಸ ತಿರುವು ಪಡೆದುಕೊಂಡಿದೆ.
ಇದು ಕೇವಲ ಪ್ರಣಯ ಪ್ರಸಂಗವಲ್ಲ, ಬದಲಿಗೆ ಇದೊಂದು ವ್ಯವಸ್ಥಿತ ‘ಹನಿಟ್ರ್ಯಾಪ್’ ಮತ್ತು ಮಠದ ಗೌರವವನ್ನೇ ಅಡವಿಟ್ಟು ನಡೆಸುತ್ತಿರುವ ಬೃಹತ್ ವಸೂಲಿ ದಂಧೆ ಎಂಬ ಸಂಶಯಗಳು ದಟ್ಟವಾಗಿವೆ. ಶ್ರೀಗಳ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಸಮುದಾಯದ ಕೆಲವು ವಿವಿಐಪಿಗಳೇ ಸೇರಿ ಈ ಸ್ಕೆಚ್ ಹಾಕಿದ್ದಾರಾ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ದೊಡ್ಡ ಮಟ್ಟದ ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ದುಷ್ಟಕೂಟಕ್ಕೆ ಸ್ವಾಮೀಜಿ ಬಗ್ಗದಿದ್ದಾಗ, ಅವರಿಗೆ ಅಮಾನವೀಯವಾಗಿ ಚಿತ್ರಹಿಂಸೆ ನೀಡಿ ಬಲವಂತದ ತಪ್ಪೊಪ್ಪಿಗೆ ವಿಡಿಯೋ ಮಾಡಿಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಎಂಟು ದಿನಗಳಿಂದ ಶ್ರೀಗಳು ರಹಸ್ಯವಾಗಿ ಚಿಕಿತ್ಸೆ ಪಡೆಯುತ್ತಿರುವುದಕ್ಕೆ ಸಾರ್ವಜನಿಕರ ಪೆಟ್ಟು ಕಾರಣವೋ ಅಥವಾ ಈ ಬ್ಲ್ಯಾಕ್ಮೇಲ್ ತಂತ್ರ ನಡೆಸಿದ ಕಿಂಗ್ಪಿನ್ ಅಡಗುದಾಣದಲ್ಲಿ ನೀಡಿದ ಶಾರೀರಿಕ ಹಿಂಸೆಯೋ ಎಂಬುದು ನಿಗೂಢವಾಗಿದೆ. ಈ ಇಡೀ ಪ್ರಸಂಗದ ಹಿಂದೆ ಶಕ್ತಿಶಾಲಿ ಸ್ವಾಮೀಜಿಯನ್ನೇ ಕೆಡವಲು ನಡೆದ ರಾಜಕೀಯ ಸಂಚು ಅಡಗಿದೆ ಎನ್ನಲಾಗುತ್ತಿದೆ.


