ಬೆಂಗಳೂರು: ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಎಂಎಲ್ಸಿ ಎನ್. ರವಿ ಕುಮಾರ್ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ನಾಯಕರಿಂದ ಮಹಿಳೆಯರ ನಿಂದನೆ ನಿರಂತರವಾಗಿ ನಡೆಯುತ್ತಿದೆ. ಬಾಯಿ ತೆಗೆದ್ರೆ ಕೆಟ್ಟ ಮಾತುಗಳನ್ನು ರವಿಕುಮಾರ್ ಹೇಳುತ್ತಿದ್ದಾರೆ.. ಮಾನ, ಮರ್ಯಾದೆ, ನಾಚಿಕೆ ಇಲ್ಲದ ವ್ಯಕ್ತಿ ರವಿಕುಮಾರ್ ಎಂದು ಕಿಡಿಕಾರಿದ್ರು.. ಮಖ್ಯ ಕಾರ್ಯದರ್ಶಿ ಬಗ್ಗೆ ಸಲ್ಲದ ಮಾತನಾಡಿದ್ದು ಮಹಿಳಾ ಕುಲಕ್ಕೆ ಮಾಡಿದ ಅವಮಾನವಾಗಿದೆ. ಬಿಜೆಪಿ ಕುಟೀಲ ರಾಜಕೀಯದ ಮತ್ತೊಂದು ಮುಖವಾಡ ಕಳಚಿದೆ. ಈ ರೀತಿ ಮಾತಾಡುವವರಿಗೆ ಕಾನೂನು ತರುವ ವಿಚಾರ ಮಾಡ್ತೇವೆ ಎಂದು ಗುಡುಗಿದ್ರು.
ಕಳೆದ ಬಾರಿ ಬೆಳಗಾವಿ ಅಧಿವೇಶನದ ಸಮಯದಲ್ಲಿ ಸಿ.ಟಿ ರವಿ ಅವರು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ ಆ ಪಕ್ಷದ ಯಾವ ಒಬ್ಬ ನಾಯಕರು ಮಾತನಾಡಲಿಲ್ಲ. ಇದು ಮಹಿಳೆಯರಿಗೆ ಬಿಜೆಪಿ ನಾಯಕರು ಎಂತಹ ಮರ್ಯಾದೆ ಕೊಡುತ್ತಾ ಎಂಬುದನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ.