Top Newsಜಿಲ್ಲೆ

ಶೀಘ್ರ ಮಾದಿಗ ಒಳಮೀಸಲಾತಿ ಜಾರಿ ಮಾಡುವಂತೆ ಎ. ನಾರಾಯಣಸ್ವಾಮಿ ಆಗ್ರಹ

ತುಮಕೂರು: ಮಾದಿಗ ಒಳಮೀಸಲಾತಿ ಜಾರಿ ಮಾಡದೇ ರಾಜ್ಯ ಸರ್ಕಾರ ಕುಂಟು ನೆಪ ನೀಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಂಸದ ಎ. ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಅವರು ಮಾದಿಗ ಒಳಮೀಸಲಾತಿಯನ್ನು ಕೂಡಲೇ ಜಾರಿ ಮಾಡಬೇಕು. ಇಲ್ಲದಿದ್ದರೆ ರಾಜ್ಯ ಬಂದ್​ ಮಾಡಿ ರಾಜ್ಯ ಸರ್ಕಾರ ನಿಷ್ಕ್ರಿಯಗೊಳುವಂತೆ ಮಾಡುತ್ತೇವೆ ಎಂದು ಕಿಡಿಕಾರಿದ್ರು.

3 ದಶಕಗಳ ಮಾದಿಗ ಸಮುದಾಯದ ಹೋರಾಟದ ಫಲ ಇದು. ಇದೇ ಆಗಸ್ಟ್ 1 ಕ್ಕೆ ಸುಪ್ರೀಂಕೋರ್ಟ್ ಆದೇಶ ಬಂದು ಒಂದು ವರ್ಷ ಆಗುತ್ತದೆ. ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೊದಲ ಕ್ಯಾಬಿನೆಟ್​​ನಲ್ಲೇ, ಒಳಮೀಸಲಾತಿಗೆ ಜಾರಿಗೆ ತರುತ್ತೇವೆ ಎಂದು ಬಡಾಯಿ ಕೊಚ್ಚಿಕೊಂಡಿತ್ತು. ಆದ್ರೆ ಇದೀಗ ಸರ್ಕಾರ ಕುಂಟು ನೆಪ ಹೇಳುತ್ತಿದೆ ಎಂದು ಕಿಡಿಕಾರಿದ್ರು.

ನಾಗಮೋಹನ್ ದಾಸ್ ಕಮಿಷನ್  ನೇಮಕ ಮಾಡಿದ್ದೇವೆಂದು ಹೇಳಿ ಜಾರಿ‌ ಮಾಡೋದನ್ನ ನಿಧಾನಗತಿ ಮಾಡ್ತಿದ್ದಾರೆ. ಬರುವ ಆಗಸ್ಟ್​ 1 ರಂದು ಮಾದಿಗ ಸಮುದಾಯದವರು ರಾಜ್ಯದ ಎಲ್ಲಾ ಡಿಸಿ ಕಚೇರಿಗಳ ಮುಂದೆ ಬೃಹತ್​ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ರು.

Comments (0)

Your email address will not be published. Required fields are marked *

Back to top button