Wednesday, February 25, 2026
28.8 C
Bengaluru
Google search engine
LIVE
ಮನೆ#Exclusive NewsTop Newsಶಾಸಕರ ಬಂಧನದಲ್ಲಿ ಷಡ್ಯಂತ್ರ;ಚಂದ್ರು ಲಮಾಣಿ ಕೇಸ್‌ನಲ್ಲಿ ಸ್ವಾಮೀಜಿ ಹಸ್ತಕ್ಷೇಪ?

ಶಾಸಕರ ಬಂಧನದಲ್ಲಿ ಷಡ್ಯಂತ್ರ;ಚಂದ್ರು ಲಮಾಣಿ ಕೇಸ್‌ನಲ್ಲಿ ಸ್ವಾಮೀಜಿ ಹಸ್ತಕ್ಷೇಪ?

ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದು ಪರಪ್ಪನ ಅಗ್ರಹಾರ ಜೈಲು ಸೇರಿರುವ ಪ್ರಕರಣದಲ್ಲಿ ಈಗ ಹೊಸ ತಿರುವು ಲಭಿಸಿದೆ. ಈ ಪ್ರಕರಣದ ಹಿಂದೆ ಸ್ವಾಮೀಜಿಯೊಬ್ಬರ ಸಂಚು ಇತ್ತೇ ಎಂಬ ಸಂಶಯಕ್ಕೆ ಪುಷ್ಟಿ ನೀಡುವಂತೆ ಅದರಹಳ್ಳಿಯ ಕುಮಾರ ಮಹಾರಾಜರ ಸ್ವಾಮೀಜಿ ಮತ್ತು ಕಾಂಗ್ರೆಸ್ ನಾಯಕಿಯೊಬ್ಬರ ನಡುವಿನ ಸ್ಫೋಟಕ ಆಡಿಯೋ ಸಂಭಾಷಣೆಯನ್ನು ಗುತ್ತಿಗೆದಾರ ಸೋನು ಲಮಾಣಿ ಬಿಡುಗಡೆ ಮಾಡಿದ್ದಾರೆ.

ಈ ಹಿಂದೆಯೇ ಬಿಜೆಪಿ ಕಾರ್ಯಕರ್ತರೊಬ್ಬರ ಜೊತೆಗಿನ ಆಡಿಯೋ ವೈರಲ್ ಆಗಿದ್ದ ಬೆನ್ನಲ್ಲೇ ಈಗ ಈ ಎರಡನೇ ಆಡಿಯೋ ಭಾರಿ ಸಂಚಲನ ಮೂಡಿಸಿದ್ದು, ಶಾಸಕರನ್ನು ಉದ್ದೇಶಪೂರ್ವಕವಾಗಿ ಯಾವುದಾದರೂ ಒಂದು ಪ್ರಕರಣದಲ್ಲಿ ಸಿಲುಕಿಸುವ ಪ್ಲಾನ್ ಬಗ್ಗೆ ಚರ್ಚೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಆಡಿಯೋ ಬಿಡುಗಡೆ ಮಾಡಿರುವ ಸೋನು ಲಮಾಣಿ, ಶಾಸಕರ ವಿರುದ್ಧ ನಡೆದ ಈ ಲೋಕಾಯುಕ್ತ ದಾಳಿಯ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ ಎಂದು ಗಂಭೀರವಾಗಿ ಹೇಳಿಕೊಂಡಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments